<p class="bodytext"><strong>ನವದೆಹಲಿ: </strong>ಶಾಲಾ ವಿದ್ಯಾರ್ಥಿಗಳು, ಅಥ್ಲೀಟ್ಗಳು ಹಾಗೂ ಉದ್ಯೋಗ, ಶಿಕ್ಷಣ ನಿಮಿತ್ತ ವಿದೇಶಗಳಿಗೆ ಪ್ರಯಾಣಿಸುವವರಿಗಾಗಿ ಕೋವಿಡ್ ಲಸಿಕೆ ನೀಡಲು ದೆಹಲಿ ಸರ್ಕಾರ ಪ್ರತ್ಯೇಕ ಕೋವಿಡ್ ಲಸಿಕಾ ಕೇಂದ್ರವನ್ನು ಆರಂಭಿಸಿದೆ.</p>.<p class="bodytext">ನಗರದಮಂದಿರ ಮಾರ್ಗದಲ್ಲಿರುವ ನವಯುಗ್ ಶಾಲೆಯಲ್ಲಿ ತೆರೆದಿರುವ ಈ ಕೇಂದ್ರವನ್ನುದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೋಮವಾರ ಉದ್ಘಾಟಿಸಿದರು.</p>.<p>ನಂತರ ಮಾತನಾಡಿದ ಸಿಸೋಡಿಯಾ, ಈ ವಿಭಾಗಗಳ ಅಡಿಯಲ್ಲಿ ಬರುವ ಜನರು ತಮ್ಮ ಮೊದಲ ಶಾಟ್ನ ದಿನಾಂಕದಿಂದ 28-84 ದಿನಗಳ ಅಂತರದ ನಂತರ ವಿಶೇಷ ನಿಬಂಧನೆಗಳ ಅಡಿಯಲ್ಲಿ ತಮ್ಮ ಎರಡನೇ ಲಸಿಕೆ ಪ್ರಮಾಣವನ್ನು ಶಿಬಿರದಲ್ಲಿ ಪಡೆಯಲು ಸಾಧ್ಯವಾಗುತ್ತದೆ ಎಂದರು.</p>.<p>ಈ ಮೂರು ವಿಭಾಗಗಳಲ್ಲಿ ಗುರುತಿಸಿಕೊಂಡವರು ಮೊದಲ ಡೋಸ್ ಪಡೆದು 28–84 ದಿನಗಳ ಅಂತರದಲ್ಲಿ ತಮ್ಮ ಎರಡನೇ ಡೋಸ್ ಲಸಿಕೆಯನ್ನು ಈ ಕೇಂದ್ರದಲ್ಲಿ ಪಡೆಯಲು ನೆರವಾಗಲಿದೆ. ವಿಶೇಷ ಲಸಿಕಾ ಕೇಂದ್ರದ ಉದ್ದೇಶವು ವಿದೇಶಕ್ಕೆ ಪ್ರಯಾಣಿಸುವವರಿಗೆ ಹೆಚ್ಚು ಅನುಕೂಲ ಮಾಡಿಕೊಡುವುದಾಗಿದೆ ಎಂದು ಸಿಸೋಡಿಯಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="bodytext"><strong>ನವದೆಹಲಿ: </strong>ಶಾಲಾ ವಿದ್ಯಾರ್ಥಿಗಳು, ಅಥ್ಲೀಟ್ಗಳು ಹಾಗೂ ಉದ್ಯೋಗ, ಶಿಕ್ಷಣ ನಿಮಿತ್ತ ವಿದೇಶಗಳಿಗೆ ಪ್ರಯಾಣಿಸುವವರಿಗಾಗಿ ಕೋವಿಡ್ ಲಸಿಕೆ ನೀಡಲು ದೆಹಲಿ ಸರ್ಕಾರ ಪ್ರತ್ಯೇಕ ಕೋವಿಡ್ ಲಸಿಕಾ ಕೇಂದ್ರವನ್ನು ಆರಂಭಿಸಿದೆ.</p>.<p class="bodytext">ನಗರದಮಂದಿರ ಮಾರ್ಗದಲ್ಲಿರುವ ನವಯುಗ್ ಶಾಲೆಯಲ್ಲಿ ತೆರೆದಿರುವ ಈ ಕೇಂದ್ರವನ್ನುದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೋಮವಾರ ಉದ್ಘಾಟಿಸಿದರು.</p>.<p>ನಂತರ ಮಾತನಾಡಿದ ಸಿಸೋಡಿಯಾ, ಈ ವಿಭಾಗಗಳ ಅಡಿಯಲ್ಲಿ ಬರುವ ಜನರು ತಮ್ಮ ಮೊದಲ ಶಾಟ್ನ ದಿನಾಂಕದಿಂದ 28-84 ದಿನಗಳ ಅಂತರದ ನಂತರ ವಿಶೇಷ ನಿಬಂಧನೆಗಳ ಅಡಿಯಲ್ಲಿ ತಮ್ಮ ಎರಡನೇ ಲಸಿಕೆ ಪ್ರಮಾಣವನ್ನು ಶಿಬಿರದಲ್ಲಿ ಪಡೆಯಲು ಸಾಧ್ಯವಾಗುತ್ತದೆ ಎಂದರು.</p>.<p>ಈ ಮೂರು ವಿಭಾಗಗಳಲ್ಲಿ ಗುರುತಿಸಿಕೊಂಡವರು ಮೊದಲ ಡೋಸ್ ಪಡೆದು 28–84 ದಿನಗಳ ಅಂತರದಲ್ಲಿ ತಮ್ಮ ಎರಡನೇ ಡೋಸ್ ಲಸಿಕೆಯನ್ನು ಈ ಕೇಂದ್ರದಲ್ಲಿ ಪಡೆಯಲು ನೆರವಾಗಲಿದೆ. ವಿಶೇಷ ಲಸಿಕಾ ಕೇಂದ್ರದ ಉದ್ದೇಶವು ವಿದೇಶಕ್ಕೆ ಪ್ರಯಾಣಿಸುವವರಿಗೆ ಹೆಚ್ಚು ಅನುಕೂಲ ಮಾಡಿಕೊಡುವುದಾಗಿದೆ ಎಂದು ಸಿಸೋಡಿಯಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>