ಉತ್ತರಾಖಂಡದ ಹಲವೆಡೆ ಶುಕ್ರವಾರ ಹಿಮಪಾತ ಮತ್ತು ಮಳೆ ಸುರಿದಿದ್ದರಿಂದ ತಾತ್ಕಾಲಿಕ ಶಿಬಿರಗಳಲ್ಲಿ ವಾಸಿಸುತ್ತಿರುವ ಜನರ ಸಂಕಷ್ಟ ಮತ್ತಷ್ಟು ಹೆಚ್ಚಾಗಿತ್ತು.
‘ಕೆಟ್ಟ ಹವಾಮಾನದ ಹಿನ್ನೆಲೆಯಲ್ಲಿ ಜೋಶಿಮಠದ ಅಸುರಕ್ಷಿತ ಹೋಟೆಲ್ಗಳು ಮತ್ತು ಮನೆಗಳನ್ನು ಉರುಳಿಸುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು’ ಎಂದು ಚಮೊಲಿ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಹಿಮಾಂಶು ಖುರಾನಾ ಹೇಳಿದ್ದಾರೆ.