<p><strong>ಪಾಲ್ಘಾರ್: </strong>ಇಲ್ಲಿನ ರೈಲ್ವೆ ಪೊಲೀಸರು, ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟ ಹದಿನಾರು ತಿಂಗಳ ನಂತರ, ಡಿಎನ್ಎ ಮಾದರಿಯ ವಿಶ್ಲೇಷಣೆ ಮೂಲಕ ಆ ವ್ಯಕ್ತಿಯ ಕುಟುಂಬವನ್ನು ಪತ್ತೆ ಮಾಡಿದ್ದಾರೆ.</p>.<p>ಪಾಲ್ಘಾರ್ ಮತ್ತು ಬೋಯಿಸಾರ್ ರೈಲ್ವೆ ನಿಲ್ದಾಣಗಳ ನಡುವಿನ ಹಳಿಯ ಮೇಲೆ 2019ರಲ್ಲಿ 32 ವರ್ಷದ ಅಪರಿಚಿತ ವ್ಯಕ್ತಿಯೊಬ್ಬನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತಪಟ್ಟ ವ್ಯಕ್ತಿಯ ಗುರುತು ಸಿಕ್ಕಿರಲಿಲ್ಲ. ಮೃತ ವ್ಯಕ್ತಿಯ ಮೂಳೆಗಳನ್ನು ಡಿಎನ್ಎ ಪರೀಕ್ಷೆಗಾಗಿ ಮುಂಬೈನ ಪ್ರಯೋಗಾಲಯದಲ್ಲಿ ಸಂಗ್ರಹಿಸಿಡಲಾಗಿತ್ತು.</p>.<p>ಪೊಲೀಸರು ಈ ವ್ಯಕ್ತಿಯ ಕುಟುಂಬದವರನ್ನು ಪತ್ತೆ ಮಾಡಲು ತನಿಖೆ ಮುಂದುವರಿಸಿದ್ದರು. ರೈಲ್ವೆ ಸ್ಟೇಷನ್ಗಳ ಆಸುಪಾಸಿನ ಹಳ್ಳಿಗಳಿಗೆ ಭೇಟಿ ನೀಡಿ, ‘ನಿಮ್ಮ ಮನೆಯಲ್ಲಿ ಯಾರಾದರೂ ನಾಪತ್ತೆಯಾಗಿದ್ದಾರಾ‘ ಎಂದು ವಿಚಾರಿಸುತ್ತಿದ್ದರು.</p>.<p>ತನಿಖೆಯ ಸಂದರ್ಭದಲ್ಲಿ 58 ವರ್ಷದ ಕಾರ್ಮಿಕರೊಬ್ಬರು, ‘ನನ್ನ ಮಗ ನಾಪತ್ತೆಯಾಗಿದ್ದಾನೆ‘ ಎಂದು ಹೇಳಿದರು. ಪೊಲೀಸರು ಆ ವ್ಯಕ್ತಿಯ ರಕ್ತದ ಮಾದರಿಯನ್ನು ಪರೀಕ್ಷೆ ಮತ್ತು ಡಿಎನ್ಎ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದರು.</p>.<p>‘ಐದಾರು ದಿನಗಳ ನಂತರ, ಪ್ರಯೋಗಾಲಯದವರು ಮೃತ ವ್ಯಕ್ತಿ ಮತ್ತು ಈ ಕಾರ್ಮಿಕನ ಡಿಎನ್ಎ ಮಾದರಿಗಳು ಹೊಂದಿಕೆಯಾಗುತ್ತಿವೆ. ಈ ಪ್ರಕಾರ, ಮೃತ ವಕ್ತಿಯು ಆ ಕಾರ್ಮಿಕನ ಮಗ ಎಂದು ಮಾಹಿತಿ ನೀಡಿದರು‘ ಎಂದು ಪಾಲ್ಘಾರ್ ರೈಲ್ವೆ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಯೋಗೇಶ್ ಆತ್ಮರಾಮ್ ದೇವಾರೆ ತಿಳಿಸಿದ್ದಾರೆ.</p>.<p>‘ಈ ವಿಷಯವನ್ನು ಮೃತ ವ್ಯಕ್ತಿಯ ಕುಟುಂಬದವರಿಗೆ ತಿಳಿಸಿದ್ದೇವೆ‘ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಲ್ಘಾರ್: </strong>ಇಲ್ಲಿನ ರೈಲ್ವೆ ಪೊಲೀಸರು, ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟ ಹದಿನಾರು ತಿಂಗಳ ನಂತರ, ಡಿಎನ್ಎ ಮಾದರಿಯ ವಿಶ್ಲೇಷಣೆ ಮೂಲಕ ಆ ವ್ಯಕ್ತಿಯ ಕುಟುಂಬವನ್ನು ಪತ್ತೆ ಮಾಡಿದ್ದಾರೆ.</p>.<p>ಪಾಲ್ಘಾರ್ ಮತ್ತು ಬೋಯಿಸಾರ್ ರೈಲ್ವೆ ನಿಲ್ದಾಣಗಳ ನಡುವಿನ ಹಳಿಯ ಮೇಲೆ 2019ರಲ್ಲಿ 32 ವರ್ಷದ ಅಪರಿಚಿತ ವ್ಯಕ್ತಿಯೊಬ್ಬನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತಪಟ್ಟ ವ್ಯಕ್ತಿಯ ಗುರುತು ಸಿಕ್ಕಿರಲಿಲ್ಲ. ಮೃತ ವ್ಯಕ್ತಿಯ ಮೂಳೆಗಳನ್ನು ಡಿಎನ್ಎ ಪರೀಕ್ಷೆಗಾಗಿ ಮುಂಬೈನ ಪ್ರಯೋಗಾಲಯದಲ್ಲಿ ಸಂಗ್ರಹಿಸಿಡಲಾಗಿತ್ತು.</p>.<p>ಪೊಲೀಸರು ಈ ವ್ಯಕ್ತಿಯ ಕುಟುಂಬದವರನ್ನು ಪತ್ತೆ ಮಾಡಲು ತನಿಖೆ ಮುಂದುವರಿಸಿದ್ದರು. ರೈಲ್ವೆ ಸ್ಟೇಷನ್ಗಳ ಆಸುಪಾಸಿನ ಹಳ್ಳಿಗಳಿಗೆ ಭೇಟಿ ನೀಡಿ, ‘ನಿಮ್ಮ ಮನೆಯಲ್ಲಿ ಯಾರಾದರೂ ನಾಪತ್ತೆಯಾಗಿದ್ದಾರಾ‘ ಎಂದು ವಿಚಾರಿಸುತ್ತಿದ್ದರು.</p>.<p>ತನಿಖೆಯ ಸಂದರ್ಭದಲ್ಲಿ 58 ವರ್ಷದ ಕಾರ್ಮಿಕರೊಬ್ಬರು, ‘ನನ್ನ ಮಗ ನಾಪತ್ತೆಯಾಗಿದ್ದಾನೆ‘ ಎಂದು ಹೇಳಿದರು. ಪೊಲೀಸರು ಆ ವ್ಯಕ್ತಿಯ ರಕ್ತದ ಮಾದರಿಯನ್ನು ಪರೀಕ್ಷೆ ಮತ್ತು ಡಿಎನ್ಎ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದರು.</p>.<p>‘ಐದಾರು ದಿನಗಳ ನಂತರ, ಪ್ರಯೋಗಾಲಯದವರು ಮೃತ ವ್ಯಕ್ತಿ ಮತ್ತು ಈ ಕಾರ್ಮಿಕನ ಡಿಎನ್ಎ ಮಾದರಿಗಳು ಹೊಂದಿಕೆಯಾಗುತ್ತಿವೆ. ಈ ಪ್ರಕಾರ, ಮೃತ ವಕ್ತಿಯು ಆ ಕಾರ್ಮಿಕನ ಮಗ ಎಂದು ಮಾಹಿತಿ ನೀಡಿದರು‘ ಎಂದು ಪಾಲ್ಘಾರ್ ರೈಲ್ವೆ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಯೋಗೇಶ್ ಆತ್ಮರಾಮ್ ದೇವಾರೆ ತಿಳಿಸಿದ್ದಾರೆ.</p>.<p>‘ಈ ವಿಷಯವನ್ನು ಮೃತ ವ್ಯಕ್ತಿಯ ಕುಟುಂಬದವರಿಗೆ ತಿಳಿಸಿದ್ದೇವೆ‘ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>