ತಮ್ಮ ವಿರುದ್ಧದ ಸುಲಿಗೆ ಆರೋಪ ಮಾಡುವ ಮೂಲಕ ತನಿಖೆಯ ದಿಕ್ಕು ತಪ್ಪಿಸುವ ಯತ್ನ ನಡೆಯುತ್ತಿದೆ ಎಂದು ಎನ್ಸಿಬಿ ಮತ್ತು ವಲಯ ನಿರ್ದೆಶಕ ಸಮೀರ್ ವಾಖೆಂಡೆ, ರಕ್ಷಣೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ತನಿಖೆಗೆ ತೊಡಕಾಗದಂತೆ ರಕ್ಷಣೆಗಾಗಿ ವಿಶೇಷ ಆದೇಶ ಮಾಡುವಂತೆ ಕೋರಿದ್ದರು. ಆದರೆ, ವಾಂಖೆಡೆ ಮತ್ತು ಎನ್ಸಿಬಿ ಅಫಿಡವಿಟ್ ಅನ್ನು ತಳ್ಳಿ ಹಾಕಿರುವ ನ್ಯಾಯಾಲಯವು, ಈ ಸಂದರ್ಭ ಆ ರೀತಿಯ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ. ಸೂಕ್ತ ಸಂದರ್ಭದಲ್ಲಿ ವಿಶೇಷ ಆದೇಶ ನೀಡುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ ಎಂದು ನ್ಯಾಯಾಧೀಶ ವಿ.ವಿ. ಪಾಟೀಲ್ ಹೇಳಿದ್ದಾರೆ.