ಕೋವಿಡ್ ಸೋಂಕಿನ ಕಾರಣಕ್ಕಾಗಿ ಕೆಲ ಆಯೋಜಕರು ಇಬ್ಬರು ಅರ್ಚಕರನ್ನು ನೇಮಿಸಿಕೊಂಡಿದ್ದಾರೆ. ಅರ್ಚಕರಿಗೆ ಕೋವಿಡ್ ಪರೀಕ್ಷೆ ಮಾಡಿಸಿಯೇ ಪೂಜೆಗೆ ಅನುವು ಮಾಡಲಾಗುತ್ತದೆಯಾದರೂ, ಒಂದು ವೇಳೆ ಸೋಂಕು ಕಾಣಿಸಿಕೊಂಡಲ್ಲಿ, ತಕ್ಷಣವೇ ಮತ್ತೊಬ್ಬ ಅರ್ಚಕರನ್ನು ಪೂಜೆಗೆ ನೇಮಿಸಬಹುದು ಎಂಬ ಲೆಕ್ಕಾಚಾರ ಆಯೋಜಕರದ್ದು. ಪ್ರಸಾದ ತಯಾರಿಸುವ ಅಡುಗೆಯವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.