<p><strong>ನವದೆಹಲಿ (ಪಿಟಿಐ):</strong> ಹಣಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ನ ಆಪ್ತರ ಹೆಸರಿನಲ್ಲಿರುವ ಮಹಾರಾಷ್ಟ್ರದ ಠಾಣೆ ಫ್ಲ್ಯಾಟ್ನ್ನು ಜಾರಿ ನಿರ್ದೇಶನಾಲಯದ (ಇ.ಡಿ)ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.</p>.<p>ಹಣಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಮುಮ್ತಾಜ್ ಶೇಖ್ ಅವರ ಸ್ಥಿರ ಆಸ್ತಿಯಾದ 55 ಲಕ್ಷ ₹ ಮೌಲ್ಯದ ಫ್ಲ್ಯಾಟ್ನ್ನು ವಶ ಮಾಡಿಕೊಳ್ಳಲಾಗಿದೆ ಎಂದು ಇ.ಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.</p>.<p><strong>ಸುಲಿಗೆ ಮಾಡಿದ ಫ್ಲ್ಯಾಟ್:</strong>ಸದ್ಯಕ್ಕೆ ಜಪ್ತಿ ಮಾಡಿರುವ ಫ್ಲ್ಯಾಟ್ ಠಾಣೆಯ ರಿಯಲ್ ಎಸ್ಟೇಟ್ ಉದ್ಯಮಿ ಸುರೇಶ್ ದೇವಿಚಂದ್ ಮೆಹ್ತಾ ಅವರಿಂದ ಸುಲಿಗೆ ಮಾಡಿದ್ದು ಎಂದು ಇ.ಡಿ ಆರೋಪಿಸಿದೆ.</p>.<p>‘ಮೆಹ್ತಾ ಅವರು ತಮ್ಮ ಪಾಲುದಾರರೊಂದಿಗೆ ಠಾಣೆಯಲ್ಲಿ ಕನ್ಸ್ಟ್ರಕ್ಷನ್ ವ್ಯವಹಾರವನ್ನ ನಡೆಸುತ್ತಿದ್ದರು. ಆರೋಪಿಗಳಾದ ಇಕ್ಬಾಲ್ ಕಸ್ಕರ್, ಮುಮ್ತಾಜ್ ಶೆಕ್ ಹಾಗೂ ಇಸ್ರಾರ್ ಅಲಿ ಜಾಮಿಲ್ ದಾವೂದ್ ಇಬ್ರಾಹಿಂನ ಆಪ್ತವರ್ಗಕ್ಕೆ ಸೇರಿದ್ದು, ಈ ಫ್ಲ್ಯಾಟ್ನ್ನು ಮೆಹ್ತಾ ಅವರಿಂದ ಸುಲಿಗೆ ಮಾಡಿ ಮುಮ್ತಾಜ್ ಹೆಸರಿಗೆ ವರ್ಗಾಯಿಸಲಾಗಿದೆ’ ಎಂದು ಇ.ಡಿ ಹೇಳಿದೆ.</p>.<p>‘ಇದಲ್ಲದೇ ಮೆಹ್ತಾ ಅವರನ್ನು ಬೆದರಿಸಿ 10 ಲಕ್ಷ ₹ ಗಳ ಮೌಲ್ಯಕ್ಕೆ 4 ಚೆಕ್ಗಳನ್ನು ಪಡೆದುಕೊಂಡಿದ್ದ ಆರೋಪಿಗಳು, ಖಾತೆಗಳಿಂದ ಹಣವನ್ನ ಡ್ರಾ ಮಾಡಿಕೊಂಡಿದ್ದಾರೆ. ಹಣ ಡ್ರಾ ಮಾಡಿಕೊಳ್ಳುವವರನ್ನು ಮುಚ್ಚಿಡಲು ಈ ಖಾತೆಗಳನ್ನು ಸೃಷ್ಟಿಸಿದ್ದು, ಕೇವಲ ಹಣ ಡ್ರಾ ಮಾಡಲು ಉಪಯೋಗಿಸಲಾಗಿದೆ’ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.</p>.<p>ಸದ್ಯ ಇಕ್ಬಾಲ್ ಕಸ್ಕರ್ ನ್ಯಾಯಾಂಗ ಬಂಧನದಲ್ಲಿದ್ದು, ಈಗ ಜಾರಿ ನಿರ್ದೇಶನಾಲಯ ಕಸ್ಕರ್ ಮೇಲೆ ಹೊಸ ಪ್ರಕರಣ ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಹಣಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ನ ಆಪ್ತರ ಹೆಸರಿನಲ್ಲಿರುವ ಮಹಾರಾಷ್ಟ್ರದ ಠಾಣೆ ಫ್ಲ್ಯಾಟ್ನ್ನು ಜಾರಿ ನಿರ್ದೇಶನಾಲಯದ (ಇ.ಡಿ)ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.</p>.<p>ಹಣಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಮುಮ್ತಾಜ್ ಶೇಖ್ ಅವರ ಸ್ಥಿರ ಆಸ್ತಿಯಾದ 55 ಲಕ್ಷ ₹ ಮೌಲ್ಯದ ಫ್ಲ್ಯಾಟ್ನ್ನು ವಶ ಮಾಡಿಕೊಳ್ಳಲಾಗಿದೆ ಎಂದು ಇ.ಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.</p>.<p><strong>ಸುಲಿಗೆ ಮಾಡಿದ ಫ್ಲ್ಯಾಟ್:</strong>ಸದ್ಯಕ್ಕೆ ಜಪ್ತಿ ಮಾಡಿರುವ ಫ್ಲ್ಯಾಟ್ ಠಾಣೆಯ ರಿಯಲ್ ಎಸ್ಟೇಟ್ ಉದ್ಯಮಿ ಸುರೇಶ್ ದೇವಿಚಂದ್ ಮೆಹ್ತಾ ಅವರಿಂದ ಸುಲಿಗೆ ಮಾಡಿದ್ದು ಎಂದು ಇ.ಡಿ ಆರೋಪಿಸಿದೆ.</p>.<p>‘ಮೆಹ್ತಾ ಅವರು ತಮ್ಮ ಪಾಲುದಾರರೊಂದಿಗೆ ಠಾಣೆಯಲ್ಲಿ ಕನ್ಸ್ಟ್ರಕ್ಷನ್ ವ್ಯವಹಾರವನ್ನ ನಡೆಸುತ್ತಿದ್ದರು. ಆರೋಪಿಗಳಾದ ಇಕ್ಬಾಲ್ ಕಸ್ಕರ್, ಮುಮ್ತಾಜ್ ಶೆಕ್ ಹಾಗೂ ಇಸ್ರಾರ್ ಅಲಿ ಜಾಮಿಲ್ ದಾವೂದ್ ಇಬ್ರಾಹಿಂನ ಆಪ್ತವರ್ಗಕ್ಕೆ ಸೇರಿದ್ದು, ಈ ಫ್ಲ್ಯಾಟ್ನ್ನು ಮೆಹ್ತಾ ಅವರಿಂದ ಸುಲಿಗೆ ಮಾಡಿ ಮುಮ್ತಾಜ್ ಹೆಸರಿಗೆ ವರ್ಗಾಯಿಸಲಾಗಿದೆ’ ಎಂದು ಇ.ಡಿ ಹೇಳಿದೆ.</p>.<p>‘ಇದಲ್ಲದೇ ಮೆಹ್ತಾ ಅವರನ್ನು ಬೆದರಿಸಿ 10 ಲಕ್ಷ ₹ ಗಳ ಮೌಲ್ಯಕ್ಕೆ 4 ಚೆಕ್ಗಳನ್ನು ಪಡೆದುಕೊಂಡಿದ್ದ ಆರೋಪಿಗಳು, ಖಾತೆಗಳಿಂದ ಹಣವನ್ನ ಡ್ರಾ ಮಾಡಿಕೊಂಡಿದ್ದಾರೆ. ಹಣ ಡ್ರಾ ಮಾಡಿಕೊಳ್ಳುವವರನ್ನು ಮುಚ್ಚಿಡಲು ಈ ಖಾತೆಗಳನ್ನು ಸೃಷ್ಟಿಸಿದ್ದು, ಕೇವಲ ಹಣ ಡ್ರಾ ಮಾಡಲು ಉಪಯೋಗಿಸಲಾಗಿದೆ’ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.</p>.<p>ಸದ್ಯ ಇಕ್ಬಾಲ್ ಕಸ್ಕರ್ ನ್ಯಾಯಾಂಗ ಬಂಧನದಲ್ಲಿದ್ದು, ಈಗ ಜಾರಿ ನಿರ್ದೇಶನಾಲಯ ಕಸ್ಕರ್ ಮೇಲೆ ಹೊಸ ಪ್ರಕರಣ ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>