<p><strong>ನವದೆಹಲಿ:</strong> ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪ್ತ ಅಲಂಕಾರ್ ಸವಾಯಿ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮೂರು ದಿನಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.</p>.<p>ಕ್ರೌಡ್ ಫಂಡಿಂಗ್ ಹಗರಣದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ವಕ್ತಾರ ಸಾಕೇತ್ ಗೋಖಲೆ ಅವರನ್ನು ಇತ್ತೀಚೆಗೆ ಗುಜರಾತ್ನಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಅಲಂಕಾರ್ ಸವಾಯಿ ಅವರ ಹೇಳಿಕೆಯನ್ನು ಇ.ಡಿ ದಾಖಲಿಸಿಕೊಂಡಿದೆ.</p>.<p>ಈ ಸಂಬಂಧ ಅಲಂಕಾರ್ ಸವಾಯಿಗೆ ಸಮನ್ಸ್ ನೀಡಲಾಗಿತ್ತು.</p>.<p>ಇದನ್ನೂ ಓದಿ: <a href="https://www.prajavani.net/karnataka-news/karnataka-assembly-election-2023-bs-yediyurappa-bjp-congress-politics-1012376.html" itemprop="url">ಬಿಜೆಪಿಗೆ 130 ಸ್ಥಾನ ಖಚಿತ, ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಿಎಸ್ವೈ </a></p>.<p>35 ವರ್ಷದ ಗೋಖಲೆ ಅವರ ಖಾತೆಗೆ ಒಂದು ವರ್ಷದಲ್ಲಿ ₹23.54 ಲಕ್ಷ ನಗದು ರೂಪದಲ್ಲಿ ಜಮೆ ಮಾಡಲಾಗಿದೆ. ಈ ಕುರಿತು ವಿಚಾರಣೆ ನಡೆಸಿದಾಗ ಕಾಂಗ್ರೆಸ್ನ ಸಾಮಾಜಿಕ ಜಾಲತಾಣದ ನಿರ್ವಹಣೆ ಮತ್ತು ಇತರೆ ಸಲಹೆಗಾಗಿ ಅಲಂಕಾರ್ ಸವಾಯಿ ಅವರು ನೀಡಿದ್ದರು ಎಂದು ಗೋಖಲೆ ಹೇಳಿಕೆ ನೀಡಿದ್ದರು.</p>.<p>ನಗದು ರೂಪದಲ್ಲೇ ಹಣ ನೀಡಿರುವುದೇಕೆ ಎಂದು ಕೇಳಿದಾಗ ಅದಕ್ಕೆ ಸವಾಯಿ ಅವರೇ ಉತ್ತರಿಸಬೇಕು ಎಂದು ಗೋಖಲೆ ಹೇಳಿರುವುದಾಗಿ ರಿಮಾಂಡ್ ವರದಿಯಲ್ಲಿ ಇ.ಡಿ ನ್ಯಾಯಾಲಯಕ್ಕೆ ತಿಳಿಸಿದೆ.</p>.<p>ಸಾಮಾಜಿಕ ಜಾಲತಾಣದ ಕೆಲಸಗಳಿಗೆ ಸವಾಯಿ ಅವರೊಂದಿಗೆ ಲಿಖಿತ ಕರಾರಿನ ಬಗ್ಗೆ ವಿಚಾರಿಸಿದಾಗ ಅದು ಕೇವಲ ಮೌಖಿಕ ವಹಿವಾಟು ಆಗಿದೆ ಎಂದು ಗೋಖಲೆ ಉತ್ತರಿಸಿರುವುದಾಗಿ ಇ.ಡಿ. ಹೇಳಿದೆ.</p>.<p>ಗೋಖಲೆ ತೃಣಮೂಲ ಕಾಂಗ್ರೆಸ್ ಸದಸ್ಯರಾಗಿದ್ದಾಗ ಸಮಯದಲ್ಲಿ ಈ ನಗದನ್ನು ಪಡೆದಿದ್ದರು ಎಂದು ಇ.ಡಿ ಉಲ್ಲೇಖ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪ್ತ ಅಲಂಕಾರ್ ಸವಾಯಿ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮೂರು ದಿನಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.</p>.<p>ಕ್ರೌಡ್ ಫಂಡಿಂಗ್ ಹಗರಣದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ವಕ್ತಾರ ಸಾಕೇತ್ ಗೋಖಲೆ ಅವರನ್ನು ಇತ್ತೀಚೆಗೆ ಗುಜರಾತ್ನಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಅಲಂಕಾರ್ ಸವಾಯಿ ಅವರ ಹೇಳಿಕೆಯನ್ನು ಇ.ಡಿ ದಾಖಲಿಸಿಕೊಂಡಿದೆ.</p>.<p>ಈ ಸಂಬಂಧ ಅಲಂಕಾರ್ ಸವಾಯಿಗೆ ಸಮನ್ಸ್ ನೀಡಲಾಗಿತ್ತು.</p>.<p>ಇದನ್ನೂ ಓದಿ: <a href="https://www.prajavani.net/karnataka-news/karnataka-assembly-election-2023-bs-yediyurappa-bjp-congress-politics-1012376.html" itemprop="url">ಬಿಜೆಪಿಗೆ 130 ಸ್ಥಾನ ಖಚಿತ, ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಿಎಸ್ವೈ </a></p>.<p>35 ವರ್ಷದ ಗೋಖಲೆ ಅವರ ಖಾತೆಗೆ ಒಂದು ವರ್ಷದಲ್ಲಿ ₹23.54 ಲಕ್ಷ ನಗದು ರೂಪದಲ್ಲಿ ಜಮೆ ಮಾಡಲಾಗಿದೆ. ಈ ಕುರಿತು ವಿಚಾರಣೆ ನಡೆಸಿದಾಗ ಕಾಂಗ್ರೆಸ್ನ ಸಾಮಾಜಿಕ ಜಾಲತಾಣದ ನಿರ್ವಹಣೆ ಮತ್ತು ಇತರೆ ಸಲಹೆಗಾಗಿ ಅಲಂಕಾರ್ ಸವಾಯಿ ಅವರು ನೀಡಿದ್ದರು ಎಂದು ಗೋಖಲೆ ಹೇಳಿಕೆ ನೀಡಿದ್ದರು.</p>.<p>ನಗದು ರೂಪದಲ್ಲೇ ಹಣ ನೀಡಿರುವುದೇಕೆ ಎಂದು ಕೇಳಿದಾಗ ಅದಕ್ಕೆ ಸವಾಯಿ ಅವರೇ ಉತ್ತರಿಸಬೇಕು ಎಂದು ಗೋಖಲೆ ಹೇಳಿರುವುದಾಗಿ ರಿಮಾಂಡ್ ವರದಿಯಲ್ಲಿ ಇ.ಡಿ ನ್ಯಾಯಾಲಯಕ್ಕೆ ತಿಳಿಸಿದೆ.</p>.<p>ಸಾಮಾಜಿಕ ಜಾಲತಾಣದ ಕೆಲಸಗಳಿಗೆ ಸವಾಯಿ ಅವರೊಂದಿಗೆ ಲಿಖಿತ ಕರಾರಿನ ಬಗ್ಗೆ ವಿಚಾರಿಸಿದಾಗ ಅದು ಕೇವಲ ಮೌಖಿಕ ವಹಿವಾಟು ಆಗಿದೆ ಎಂದು ಗೋಖಲೆ ಉತ್ತರಿಸಿರುವುದಾಗಿ ಇ.ಡಿ. ಹೇಳಿದೆ.</p>.<p>ಗೋಖಲೆ ತೃಣಮೂಲ ಕಾಂಗ್ರೆಸ್ ಸದಸ್ಯರಾಗಿದ್ದಾಗ ಸಮಯದಲ್ಲಿ ಈ ನಗದನ್ನು ಪಡೆದಿದ್ದರು ಎಂದು ಇ.ಡಿ ಉಲ್ಲೇಖ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>