ಬಿಜೆಪಿಯ ಪ್ರಾಬಲ್ಯ ಇದೆ ಎಂಬುದು ನಿಜ. ಆದರೆ, ಹಲವು ರಾಜ್ಯಗಳಲ್ಲಿ ಆ ಪಕ್ಷವು ಅಧಿಕಾರ ಕಳೆದುಕೊಂಡಿರುವುದೂ ವಾಸ್ತವ. ಹಾಗಾಗಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುವುದು ಅಸಾಧ್ಯ ಏನಲ್ಲ. 2019ರ ಚುನಾವಣೆಯಲ್ಲಿ ಹರಿಯಾಣ, ಗುಜರಾತ್, ರಾಜಸ್ಥಾನದ ಎಲ್ಲ ಕ್ಷೇತ್ರಗಳಲ್ಲಿ ಆ ಪಕ್ಷ ಗೆದ್ದಿತ್ತು. ಬಿಹಾರ, ಮಧ್ಯ ಪ್ರದೇಶದಲ್ಲಿ ತಲಾ ಒಂದು ಕ್ಷೇತ್ರ ಬಿಟ್ಟು ಉಳಿದೆಲ್ಲವೂ ಬಿಜೆಪಿ ಪಾಲಾಗಿದ್ದವು. ಪಶ್ಚಿಮ ಬಂಗಾಳದಲ್ಲಿ 18 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಬಾರಿ ಈ ರೀತಿಯ ಗೆಲುವು ಸಾಧ್ಯವಿಲ್ಲ. ಹಾಗಾಗಿಯೇ ಬಿಜೆಪಿಗೆ ಸರಳ ಬಹು ಮತ ಸಾಧ್ಯವಿಲ್ಲ ಎಂದು ಕೇರಳ ಸಾಹಿತ್ಯೋತ್ಸವದ ಗೋಷ್ಠಿಯೊಂದರಲ್ಲಿ ಮಾತನಾಡಿದ ತರೂರ್ ಹೇಳಿದ್ದಾರೆ.