‘ಕೇರಳ ವಿಶೇಷ ಮದುವೆ ಕಾಯ್ದೆಯಡಿ ಮದುವೆಯ ಉದ್ದೇಶಿತ ನೋಟಿಸ್ ಜತೆ ಕಡ್ಡಾಯವಾಗಿ ಶುಲ್ಕವನ್ನು ಪಾವತಿಸಬೇಕಾಗಿದೆ. ಆದರೆ ಈ ಜೋಡಿಯು ಜೂನ್ 11 ರಂದು ಅಧಿಕಾರಿಗೆ ಉದ್ದೇಶಿತ ವಿವಾಹದ ನೋಟಿಸ್ ನೀಡಿದ್ದರು. ಅದರೊಂದಿಗೆ ಅಗತ್ಯ ಶುಲ್ಕವನ್ನು ಪಾವತಿಸಿರಲಿಲ್ಲ. ಹಾಗಾಗಿ ಅಧಿಕಾರಿಯು ಮದುವೆಗೆ ಸಂಬಂಧಿಸಿದ ನೋಟಿಸ್ ಅನ್ನು ಹೊರಡಿಸಿಲ್ಲ. ಈ ಬಗ್ಗೆ ಯುವಕ– ಯುವತಿಗೆ ಒಂದು ವಾರದ ಬಳಿಕ ತಿಳಿದಿದೆ’ ಎಂದು ಇವರ ಪರ ವಕೀಲ ಆರ್. ರಾಜೇಶ್ ಅವರು ಪಿಟಿಐಗೆ ತಿಳಿಸಿದರು.