<p><strong>ನವದೆಹಲಿ:</strong> ನೂತನ ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷ ಅಮಾನತಿನಲ್ಲಿಡುವ ಸರ್ಕಾರದ ಪ್ರಸ್ತಾಪದ ಬಗ್ಗೆ ಮರುಪರಿಶೀಲನೆ ನಡೆಸಲು ಪಂಜಾಬ್ನ 32 ರೈತ ಸಂಘಗಳ ಮುಖಂಡರು ಸಿಂಘು ಗಡಿಯಲ್ಲಿ ಸಭೆ ಸೇರಿದ್ದಾರೆ.</p>.<p>ಕಾಯ್ದೆಗಳನ್ನು ಅಮಾನತಿನಲ್ಲಿಡುವ ಪ್ರಸ್ತಾಪಕ್ಕೆ ಸಮ್ಮತಿಸುವುದಾದರೆ ಶನಿವಾರದ ಒಳಗೆ ತಿಳಿಸುವಂತೆ ಸರ್ಕಾರವು ಶುಕ್ರವಾರ ರೈತ ಮುಖಂಡರಿಗೆ ತಿಳಿಸಿತ್ತು.</p>.<p>ದೆಹಲಿಯ ಗಡಿ ಪ್ರದೇಶಗಳಲ್ಲಿ ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ, 40 ರೈತ ಒಕ್ಕೂಟಗಳ ನೇತೃತ್ವ ವಹಿಸಿರುವ ‘ಸಂಯುಕ್ತ್ ಕಿಸಾನ್ ಮೋರ್ಚಾ’ದ ಸಭೆಯೂ ಇಂದು (ಶನಿವಾರ) ನಡೆಯಲಿದೆ.</p>.<p>‘ಪಂಜಾಬ್ ರೈತ ಒಕ್ಕೂಟಗಳ ಸಭೆ ನಡೆಯುತ್ತಿದೆ. ‘ಸಂಯುಕ್ತ್ ಕಿಸಾನ್ ಮೋರ್ಚಾ’ದ ಸಭೆಯೂ ಇಂದೇ ನಡೆಯಲಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ (ಪಂಜಾಬ್) ಉಪಾಧ್ಯಕ್ಷ ಲಖ್ಬೀರ್ ಸಿಂಗ್ ತಿಳಿಸಿದ್ದಾರೆ.</p>.<p>ರೈತ ಮುಖಂಡರು ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳ ಜತೆ ಶುಕ್ರವಾರ ನಡೆದಿದ್ದ 11ನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿತ್ತು. ಎರಡೂ ಕಡೆಯವರು ಪಟ್ಟು ಸಡಿಲಿಸದ್ದರಿಂದ ಯಾವುದೇ ನಿರ್ಣಯಕ್ಕೆ ಬರುವುದು ಸಾಧ್ಯವಾಗಿರಲಿಲ್ಲ.</p>.<p>ಒಂದು ವೇಳೆ, ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷ ಅಮಾನತಿನಲ್ಲಿಡುವ ಪ್ರಸ್ತಾಪ ಸಮ್ಮತಿಸುವುದಾದರೆ ಶನಿವಾರ ತಿಳಿಸಬೇಕು. ಅದಾದ ಬಳಿಕವಷ್ಟೇ ಮಾತುಕತೆ ಮುಂದುವರಿಯಲು ಸಾಧ್ಯ ಎಂದು ಹೇಳಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ನೂತನ ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷ ಅಮಾನತಿನಲ್ಲಿಡುವ ಸರ್ಕಾರದ ಪ್ರಸ್ತಾಪದ ಬಗ್ಗೆ ಮರುಪರಿಶೀಲನೆ ನಡೆಸಲು ಪಂಜಾಬ್ನ 32 ರೈತ ಸಂಘಗಳ ಮುಖಂಡರು ಸಿಂಘು ಗಡಿಯಲ್ಲಿ ಸಭೆ ಸೇರಿದ್ದಾರೆ.</p>.<p>ಕಾಯ್ದೆಗಳನ್ನು ಅಮಾನತಿನಲ್ಲಿಡುವ ಪ್ರಸ್ತಾಪಕ್ಕೆ ಸಮ್ಮತಿಸುವುದಾದರೆ ಶನಿವಾರದ ಒಳಗೆ ತಿಳಿಸುವಂತೆ ಸರ್ಕಾರವು ಶುಕ್ರವಾರ ರೈತ ಮುಖಂಡರಿಗೆ ತಿಳಿಸಿತ್ತು.</p>.<p>ದೆಹಲಿಯ ಗಡಿ ಪ್ರದೇಶಗಳಲ್ಲಿ ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ, 40 ರೈತ ಒಕ್ಕೂಟಗಳ ನೇತೃತ್ವ ವಹಿಸಿರುವ ‘ಸಂಯುಕ್ತ್ ಕಿಸಾನ್ ಮೋರ್ಚಾ’ದ ಸಭೆಯೂ ಇಂದು (ಶನಿವಾರ) ನಡೆಯಲಿದೆ.</p>.<p>‘ಪಂಜಾಬ್ ರೈತ ಒಕ್ಕೂಟಗಳ ಸಭೆ ನಡೆಯುತ್ತಿದೆ. ‘ಸಂಯುಕ್ತ್ ಕಿಸಾನ್ ಮೋರ್ಚಾ’ದ ಸಭೆಯೂ ಇಂದೇ ನಡೆಯಲಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ (ಪಂಜಾಬ್) ಉಪಾಧ್ಯಕ್ಷ ಲಖ್ಬೀರ್ ಸಿಂಗ್ ತಿಳಿಸಿದ್ದಾರೆ.</p>.<p>ರೈತ ಮುಖಂಡರು ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳ ಜತೆ ಶುಕ್ರವಾರ ನಡೆದಿದ್ದ 11ನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿತ್ತು. ಎರಡೂ ಕಡೆಯವರು ಪಟ್ಟು ಸಡಿಲಿಸದ್ದರಿಂದ ಯಾವುದೇ ನಿರ್ಣಯಕ್ಕೆ ಬರುವುದು ಸಾಧ್ಯವಾಗಿರಲಿಲ್ಲ.</p>.<p>ಒಂದು ವೇಳೆ, ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷ ಅಮಾನತಿನಲ್ಲಿಡುವ ಪ್ರಸ್ತಾಪ ಸಮ್ಮತಿಸುವುದಾದರೆ ಶನಿವಾರ ತಿಳಿಸಬೇಕು. ಅದಾದ ಬಳಿಕವಷ್ಟೇ ಮಾತುಕತೆ ಮುಂದುವರಿಯಲು ಸಾಧ್ಯ ಎಂದು ಹೇಳಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>