'ನನ್ನ ಪ್ರಕಾರ 'ಕಿಸಾನ್' ಬಹಳ ಪವಿತ್ರವಾದ ಪದ. ಜನ ಸಾಮಾನ್ಯರು, ಸರ್ಕಾರ ಮತ್ತು ನಾನು ಸೇರಿದಂತೆ ಪ್ರತಿಯೊಬ್ಬರಿಗೂ ಈ ಪ್ರತಿಭಟನೆಗೆ ಕಾರಣರಾದ ರೈತರ ಬಗ್ಗೆ ನಂಬಿಕೆ ಹಾಗೂ ಗೌರವವಿದೆ ಎಂದು ಹೇಳುತ್ತೇನೆ. ಆದರೆ ದುಃಖಕರ ಸಂಗತಿಯೆಂದರೆ, ಕೆಲವು ಘಟನೆಗಳು ಪ್ರತಿಭಟನೆ ವಿರುದ್ಧ ಪ್ರಶ್ನೆಗಳನ್ನು ಹುಟ್ಟುಹಾಕಲು ಪ್ರೇರೇಪಿಸಿವೆ' ಎಂದು ಟಿಕ್ರಿ ಗಡಿಯಲ್ಲಿ ಲೈಂಗಿಕ ಕಿರುಕುಳದ ಘಟನೆ ಬಗ್ಗೆ ಉಲ್ಲೇಖಿಸಿ ಆರೋಪಿಸಿದ್ದಾರೆ.