<p><strong>ಕೋಲ್ಕತ್ತಾ:</strong> ‘ರಾಜ್ಯದಲ್ಲಿರುವ ತಾಲಿಬಾನೀಕರಣ'ವನ್ನು ತೊಡೆದು ಹಾಕುವುದಾಗಿ ಮಂಗಳವಾರ ಪ್ರತಿಜ್ಞೆ ಮಾಡಿದ ಪಶ್ಚಿಮ ಬಂಗಾಳದ ನೂತನ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮುಜಂದಾರ್, ಈವರೆಗೆ ಆಗಿರುವ ತಪ್ಪುಗಳನ್ನು ಪಕ್ಷವು ಸರಿಪಡಿಸಿಕೊಳ್ಳಲಿದೆ ಮತ್ತು ಮುಂದೆ ವಿಜಯದ ದಿನಗಳು ಮರುಕಳಿಸಲಿವೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p>ಇಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ರಾಜ್ಯಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ‘ರಾಜ್ಯ ಬಿಜೆಪಿಯೊಳಗೆ ಸರಣಿಯಾಗಿ ನಡೆಯುತ್ತಿರುವ ಪಕ್ಷಾಂತರದ ಬಗ್ಗೆ ಹೆಚ್ಚು ತಲೆಕೆಡೆಸಿಕೊಳ್ಳುವುದಿಲ್ಲ. ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವವರು ಎಂದೂ ಪಕ್ಷವನ್ನು ತೊರೆಯಲು ಸಾಧ್ಯವಿಲ್ಲ‘ ಎಂದು ಸ್ಪಷ್ಟವಾಗಿ ಹೇಳಿದರು.</p>.<p>‘ರಾಜ್ಯದಲ್ಲಿ ನಡೆಯುತ್ತಿರುವ ತಾಲಿಬಾನೀಕರಣದ ವಿರುದ್ಧ ಪಕ್ಷದ ಹಿಂದಿನ ರಾಜ್ಯಘಟಕದ ಅಧ್ಯಕ್ಷರು ಮತ್ತು ಪಕ್ಷದ ನಾಯಕರ ಸಹಕಾರದೊಂದಿಗೆ ಹೋರಾಟ ಮುಂದುವರಿಸುತ್ತೇನೆ‘ ಎಂದರು.</p>.<p>‘ಬಿಜೆಪಿಯವರಿಗೆ ಕಾರ್ಯಕರ್ತರೇ ನಿಜವಾದ ಆಸ್ತಿ. ನಾವೇನಾದರೂ ತಪ್ಪು ಮಾಡಿದರೆ, ನಾವೇ ಅದನ್ನು ಸರಿಪಡಿಸಿಕೊಳ್ಳುತ್ತೇವೆ‘ ಎಂದು ಸುಕಾಂತ ಹೇಳಿದರು.</p>.<p><a href="https://www.prajavani.net/karnataka-news/gulihatti-shekar-accused-his-mother-had-been-converted-to-christianity-through-dangle-868599.html" itemprop="url">ನನ್ನ ತಾಯಿಯನ್ನೂ ಆಮಿಷ ಒಡ್ಡಿ ಮತಾಂತರ ಮಾಡಲಾಗಿದೆ: ಗೂಳಿಹಟ್ಟಿ ಶೇಖರ್ </a></p>.<p>‘ಪಕ್ಷವನ್ನು ತೊರೆಯುವ ಮೂಲಕ ಪಕ್ಷಕ್ಕೆ ಹಾನಿ ಮಾಡಬಹುದು ಎಂದು ಯಾರಾದರೂ ಯೋಚಿಸುತ್ತಿದ್ದರೆ, ಅದು ಖಂಡಿತಾ ತಪ್ಪು. ಬಿಜೆಪಿಯಲ್ಲಿ ಅಂಥದ್ದು ಸಂಭವಿಸುವುದಿಲ್ಲ. ಸಿದ್ಧಾಂತಕ್ಕೆ ಬದ್ಧರಾಗಿರುವವರು ಪಕ್ಷವನ್ನು ತೊರೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಪಕ್ಷ ವಿಜಯಶಾಲಿಯಾಗಲಿದೆ‘ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.</p>.<p>ಪಕ್ಷದೊಳಗಿನ ಆಂತರಿಕ ಸಂಘರ್ಷ ಮತ್ತು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದೊಂದಿಗಿನ ಜಟಾಪಟಿಯ ನಡುವೆ ಬಿಜೆಪಿ, ಸೋಮವಾರ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷರಾಗಿದ್ದ ದೀಪಕ್ ಘೋಷ್ ಅವರನ್ನು ಬದಲಿಸಿ, ಆ ಜಾಗಕ್ಕೆ ಸಂಸದ ಸುಕಾಂತ ಮುಜಂದಾರ್ ಅವರನ್ನು ನೇಮಿಸಿದೆ. ದಿಲೀಪ್ ಘೋಷ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.</p>.<p><a href="https://www.prajavani.net/karnataka-news/anti-conversion-law-in-karnataka-araga-jnanendra-says-plan-to-implement-868592.html" itemprop="url">ರಾಜ್ಯದಲ್ಲಿ ಮತಾಂತರ ತಡೆಗೆ ಕಾಯ್ದೆ ತರಲು ಚಿಂತನೆ: ಆರಗ ಜ್ಞಾನೇಂದ್ರ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತಾ:</strong> ‘ರಾಜ್ಯದಲ್ಲಿರುವ ತಾಲಿಬಾನೀಕರಣ'ವನ್ನು ತೊಡೆದು ಹಾಕುವುದಾಗಿ ಮಂಗಳವಾರ ಪ್ರತಿಜ್ಞೆ ಮಾಡಿದ ಪಶ್ಚಿಮ ಬಂಗಾಳದ ನೂತನ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮುಜಂದಾರ್, ಈವರೆಗೆ ಆಗಿರುವ ತಪ್ಪುಗಳನ್ನು ಪಕ್ಷವು ಸರಿಪಡಿಸಿಕೊಳ್ಳಲಿದೆ ಮತ್ತು ಮುಂದೆ ವಿಜಯದ ದಿನಗಳು ಮರುಕಳಿಸಲಿವೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p>ಇಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ರಾಜ್ಯಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ‘ರಾಜ್ಯ ಬಿಜೆಪಿಯೊಳಗೆ ಸರಣಿಯಾಗಿ ನಡೆಯುತ್ತಿರುವ ಪಕ್ಷಾಂತರದ ಬಗ್ಗೆ ಹೆಚ್ಚು ತಲೆಕೆಡೆಸಿಕೊಳ್ಳುವುದಿಲ್ಲ. ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವವರು ಎಂದೂ ಪಕ್ಷವನ್ನು ತೊರೆಯಲು ಸಾಧ್ಯವಿಲ್ಲ‘ ಎಂದು ಸ್ಪಷ್ಟವಾಗಿ ಹೇಳಿದರು.</p>.<p>‘ರಾಜ್ಯದಲ್ಲಿ ನಡೆಯುತ್ತಿರುವ ತಾಲಿಬಾನೀಕರಣದ ವಿರುದ್ಧ ಪಕ್ಷದ ಹಿಂದಿನ ರಾಜ್ಯಘಟಕದ ಅಧ್ಯಕ್ಷರು ಮತ್ತು ಪಕ್ಷದ ನಾಯಕರ ಸಹಕಾರದೊಂದಿಗೆ ಹೋರಾಟ ಮುಂದುವರಿಸುತ್ತೇನೆ‘ ಎಂದರು.</p>.<p>‘ಬಿಜೆಪಿಯವರಿಗೆ ಕಾರ್ಯಕರ್ತರೇ ನಿಜವಾದ ಆಸ್ತಿ. ನಾವೇನಾದರೂ ತಪ್ಪು ಮಾಡಿದರೆ, ನಾವೇ ಅದನ್ನು ಸರಿಪಡಿಸಿಕೊಳ್ಳುತ್ತೇವೆ‘ ಎಂದು ಸುಕಾಂತ ಹೇಳಿದರು.</p>.<p><a href="https://www.prajavani.net/karnataka-news/gulihatti-shekar-accused-his-mother-had-been-converted-to-christianity-through-dangle-868599.html" itemprop="url">ನನ್ನ ತಾಯಿಯನ್ನೂ ಆಮಿಷ ಒಡ್ಡಿ ಮತಾಂತರ ಮಾಡಲಾಗಿದೆ: ಗೂಳಿಹಟ್ಟಿ ಶೇಖರ್ </a></p>.<p>‘ಪಕ್ಷವನ್ನು ತೊರೆಯುವ ಮೂಲಕ ಪಕ್ಷಕ್ಕೆ ಹಾನಿ ಮಾಡಬಹುದು ಎಂದು ಯಾರಾದರೂ ಯೋಚಿಸುತ್ತಿದ್ದರೆ, ಅದು ಖಂಡಿತಾ ತಪ್ಪು. ಬಿಜೆಪಿಯಲ್ಲಿ ಅಂಥದ್ದು ಸಂಭವಿಸುವುದಿಲ್ಲ. ಸಿದ್ಧಾಂತಕ್ಕೆ ಬದ್ಧರಾಗಿರುವವರು ಪಕ್ಷವನ್ನು ತೊರೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಪಕ್ಷ ವಿಜಯಶಾಲಿಯಾಗಲಿದೆ‘ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.</p>.<p>ಪಕ್ಷದೊಳಗಿನ ಆಂತರಿಕ ಸಂಘರ್ಷ ಮತ್ತು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದೊಂದಿಗಿನ ಜಟಾಪಟಿಯ ನಡುವೆ ಬಿಜೆಪಿ, ಸೋಮವಾರ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷರಾಗಿದ್ದ ದೀಪಕ್ ಘೋಷ್ ಅವರನ್ನು ಬದಲಿಸಿ, ಆ ಜಾಗಕ್ಕೆ ಸಂಸದ ಸುಕಾಂತ ಮುಜಂದಾರ್ ಅವರನ್ನು ನೇಮಿಸಿದೆ. ದಿಲೀಪ್ ಘೋಷ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.</p>.<p><a href="https://www.prajavani.net/karnataka-news/anti-conversion-law-in-karnataka-araga-jnanendra-says-plan-to-implement-868592.html" itemprop="url">ರಾಜ್ಯದಲ್ಲಿ ಮತಾಂತರ ತಡೆಗೆ ಕಾಯ್ದೆ ತರಲು ಚಿಂತನೆ: ಆರಗ ಜ್ಞಾನೇಂದ್ರ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>