ಅಭ್ಯರ್ಥಿಯನ್ನು ನಾಮ ನಿರ್ದೇಶನ ಮಾಡಲು ಹಾಗೂ ಮತ ಚಲಾಯಿಸಲು ಯಾರು ಅರ್ಹರು ಎಂಬುದನ್ನು ಪರಿಶೀಲಿಸುವುದಕ್ಕಾಗಿ ಪಟ್ಟಿಯನ್ನು ಎಲ್ಲರಿಗೂ ದೊರೆಯುವಂತೆ ಮಾಡಬೇಕು ಎಂದು ಸೆಪ್ಟೆಂಬರ್ 6ರಂದು ಬರೆಯಲಾದ ಜಂಟಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸಂಸದರಾದ ಶಶಿ ತರೂರ್, ಮನೀಷ್ ತಿವಾರಿ, ಕಾರ್ತಿ ಚಿದಂಬರಂ, ಪ್ರದ್ಯೂತ್ ಬೋರ್ದೊಲೊಯಿ ಹಾಗೂ ಅಬ್ದುಲ್ ಖಾಲಿಕ್ ಪತ್ರ ಬರೆದಿದ್ದಾರೆ.