'ಈ ಯೋಜನೆ ಬರುವ ವರೆಗೆ ಏಕೆ ಕಾಯಬೇಕು? ಪ್ರತಿ ವರ್ಷ ಕೌಶಲ ಹೊಂದಿದ, ಶಿಸ್ತಿನ ಮಾಜಿ ಯೋಧರು (ಜವಾನರು ಮತ್ತು ಅಧಿಕಾರಿಗಳು) ಸಾವಿರಾರು ಸಂಖ್ಯೆಯಲ್ಲಿ ನಿವೃತ್ತರಾಗುತ್ತಿದ್ದಾರೆ ಮತ್ತು ಗಂಭೀರವಾಗಿ 2ನೇ ವೃತ್ತಿಜೀವನವನ್ನು ಹುಡುಕುತ್ತಿದ್ದಾರೆ. ಇಂತವರಿಗೆ ನಿಮ್ಮ ಗ್ರೂಪ್ ಎಷ್ಟು ಸಹಕರಿಸಿದೆ ಎಂಬ ಅಂಕಿಅಂಶ ಕೊಟ್ಟಿದ್ದರೆ ಚೆನ್ನಾಗಿತ್ತು' ಎಂದು ನಿವೃತ್ತ ಭಾರತೀಯ ನೌಕಾ ಪಡೆ ಮುಖ್ಯಸ್ಥ ಮತ್ತು ಸಿಬ್ಬಂದಿ ಮುಖ್ಯಸ್ಥರ ಸಮಿತಿಯ ಮಾಜಿ ಅಧ್ಯಕ್ಷ ಅರುಣ್ ಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ.