<p><strong>ಲಖನೌ:</strong> ಅಯೋಧ್ಯೆಯ ರಾಮ ಜನ್ಮಭೂಮಿ ಟ್ರಸ್ಟ್ ಹೆಸರಿನಲ್ಲಿ ಅಕ್ರಮವಾಗಿ ವೆಬ್ಸೈಟ್ ಮಾಡಿ, ದೇವಾಲಯ ನಿರ್ಮಾಣದ ನೆಪದಲ್ಲಿ ಜನರಿಂದ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿದ ಐವರನ್ನು ಸೋಮವಾರ ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.</p>.<p>ಆರೋಪಿಗಳನ್ನು ನೋಯ್ಡಾ ಸೈಬರ್ ಪೊಲೀಸ್ ಠಾಣೆ ಮತ್ತು ಲಖನೌ ಸೈಬರ್ ಅಪರಾಧ ಕೇಂದ್ರದ ಜಂಟಿ ತಂಡ ಬಂಧಿಸಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>‘ಆರೋಪಿಗಳು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಹೆಸರಿನಲ್ಲಿ ವೆಬ್ಸೈಟ್ ಅನ್ನು ಮಾಡಿ, ಅದರಲ್ಲಿ ತಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹಾಕಿದ್ದರು. ಈ ಮೂಲಕ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿದ್ದರು,’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಬಂಧಿತರನ್ನು ಆಶಿಶ್ ಗುಪ್ತಾ (21), ನವೀನ್ ಕುಮಾರ್ ಸಿಂಗ್ (26), ಸುಮಿತ್ ಕುಮಾರ್ (22), ಅಮಿತ್ ಜಾ (24) ಮತ್ತು ಸೂರಜ್ ಗುಪ್ತಾ (22) ಎಂದು ಗುರುತಿಸಲಾಗಿದೆ.</p>.<p>ಈ ಪೈಕಿ ಮೂವರು ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯವರಾಗಿದ್ದರೆ, ಮತ್ತಿಬ್ಬರು ಬಿಹಾರದ ಸೀತಾಮರ್ಹಿ ಮೂಲದವರು. ಸದ್ಯ ಇವರೆಲ್ಲರೂ ನೋಯ್ಡಾದ ಪಕ್ಕದ ಪೂರ್ವ ದೆಹಲಿಯ ‘ನ್ಯೂ ಅಶೋಕ್ ನಗರ‘ದಲ್ಲಿ ನೆಲೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ವಂಚಕರ ತಂಡದಿಂದ ಪೊಲೀಸರು ಐದು ಮೊಬೈಲ್ ಫೋನ್ಗಳು, ಒಂದು ಲ್ಯಾಪ್ಟಾಪ್ ಮತ್ತು ಆಧಾರ್ ಕಾರ್ಡ್ಗಳ 50 ಪ್ರತಿಗಳನ್ನು ವಶಪಡಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಅಯೋಧ್ಯೆಯ ರಾಮ ಜನ್ಮಭೂಮಿ ಟ್ರಸ್ಟ್ ಹೆಸರಿನಲ್ಲಿ ಅಕ್ರಮವಾಗಿ ವೆಬ್ಸೈಟ್ ಮಾಡಿ, ದೇವಾಲಯ ನಿರ್ಮಾಣದ ನೆಪದಲ್ಲಿ ಜನರಿಂದ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿದ ಐವರನ್ನು ಸೋಮವಾರ ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.</p>.<p>ಆರೋಪಿಗಳನ್ನು ನೋಯ್ಡಾ ಸೈಬರ್ ಪೊಲೀಸ್ ಠಾಣೆ ಮತ್ತು ಲಖನೌ ಸೈಬರ್ ಅಪರಾಧ ಕೇಂದ್ರದ ಜಂಟಿ ತಂಡ ಬಂಧಿಸಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>‘ಆರೋಪಿಗಳು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಹೆಸರಿನಲ್ಲಿ ವೆಬ್ಸೈಟ್ ಅನ್ನು ಮಾಡಿ, ಅದರಲ್ಲಿ ತಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹಾಕಿದ್ದರು. ಈ ಮೂಲಕ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿದ್ದರು,’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಬಂಧಿತರನ್ನು ಆಶಿಶ್ ಗುಪ್ತಾ (21), ನವೀನ್ ಕುಮಾರ್ ಸಿಂಗ್ (26), ಸುಮಿತ್ ಕುಮಾರ್ (22), ಅಮಿತ್ ಜಾ (24) ಮತ್ತು ಸೂರಜ್ ಗುಪ್ತಾ (22) ಎಂದು ಗುರುತಿಸಲಾಗಿದೆ.</p>.<p>ಈ ಪೈಕಿ ಮೂವರು ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯವರಾಗಿದ್ದರೆ, ಮತ್ತಿಬ್ಬರು ಬಿಹಾರದ ಸೀತಾಮರ್ಹಿ ಮೂಲದವರು. ಸದ್ಯ ಇವರೆಲ್ಲರೂ ನೋಯ್ಡಾದ ಪಕ್ಕದ ಪೂರ್ವ ದೆಹಲಿಯ ‘ನ್ಯೂ ಅಶೋಕ್ ನಗರ‘ದಲ್ಲಿ ನೆಲೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ವಂಚಕರ ತಂಡದಿಂದ ಪೊಲೀಸರು ಐದು ಮೊಬೈಲ್ ಫೋನ್ಗಳು, ಒಂದು ಲ್ಯಾಪ್ಟಾಪ್ ಮತ್ತು ಆಧಾರ್ ಕಾರ್ಡ್ಗಳ 50 ಪ್ರತಿಗಳನ್ನು ವಶಪಡಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>