<p><strong>ಲಖನೌ</strong>: ‘300 ಯೂನಿಟ್ ಉಚಿತ ವಿದ್ಯುತ್’ ಪಡೆಯಲು ಆಸಕ್ತಿ ಇರುವವರ ನೋಂದಣಿಗೆ ಸಮಾಜವಾದಿ<br />ಪಕ್ಷವು (ಎಸ್ಪಿ) ಮನೆ ಮನೆ ಅಭಿಯಾನವನ್ನು ಮಂಗಳವಾರ ಆರಂಭಿಸಿದೆ. ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವ ‘ಸಂಕಲ್ಪ’ ತೊಟ್ಟ ಮರು ದಿನವೇ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಈ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ಧಾರೆ. ಎಸ್ಪಿ ಅಧಿಕಾರಕ್ಕೆ ಬಂದರೆ ‘300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು’ ಎಂಬುದು ಎಸ್ಪಿಯ ಭರವಸೆಗಳಲ್ಲಿ ಒಂದಾಗಿದೆ.</p>.<p>ವಿದ್ಯುತ್ ಬಳಸುತ್ತಿರುವ ಪ್ರತಿ ಮನೆಗೂ ಎಸ್ಪಿ ಕಾರ್ಯಕರ್ತರು ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಲಿದ್ದಾರೆ ಎಂದು ಅಖಿಲೇಶ್ ಹೇಳಿದ್ದಾರೆ.</p>.<p>‘ಪಾತಕಿ’ಯೊಬ್ಬರಿಗೆ ಪಕ್ಷದ ಟಿಕೆಟ್ ನೀಡುವ ಮೂಲಕ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ನು ಎಸ್ಪಿ ಉಲ್ಲಂಘಿಸಿದೆ. ಹಾಗಾಗಿ, ಆ ಪಕ್ಷದ ಮಾನ್ಯತೆ ರದ್ದುಪಡಿಸಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಅಪರಾಧಿಗಳಿದ್ದಾರೆ. ಹಾಗಾಗಿ, ಮೊದಲಿಗೆ ಆ ಪಕ್ಷದ ಮಾನ್ಯತೆ ರದ್ದುಪಡಿಸಬೇಕು ಎಂದು ಹೇಳಿದ್ದಾರೆ.</p>.<p>‘ಮುಖ್ಯಮಂತ್ರಿಯ ವಿರುದ್ಧ ಅಪರಾಧ ಪ್ರಕರಣ ಇದೆ. ಉಪ ಮುಖ್ಯಮಂತ್ರಿ ವಿರುದ್ಧವೂ ಅಪರಾಧ ಪ್ರಕರಣ ಇದೆ. ಹಾಗಾಗಿ, ಬಿಜೆಪಿಯ ಮಾನ್ಯತೆ ರದ್ದುಪಡಿಸಬೇಕು’ ಎಂದು ಅವರು ಹೇಳಿದ್ಧಾರೆ.</p>.<p>ರಾಂಪುರದ ಅಧಿಕಾರಿಯೊಬ್ಬರಿಗೆ ‘ಸರದಿ ತಪ್ಪಿಸಿ’ ಬಡ್ತಿ ಬೇಕಿತ್ತು. ಹಾಗಾಗಿ, ಆ ಅಧಿಕಾರಿಯು ಎಸ್ಪಿ ಮುಖಂಡ ಆಜಂ ಖಾನ್ ಮತ್ತು ಅವರ ಮಗ ಅಬ್ದುಲ್ಲಾ ಆಜಂ ವಿರುದ್ಧ ಹತ್ತಾರು ಪ್ರಕರಣ ದಾಖಲಿಸಿದ್ಧಾರೆ ಎಂದು ಹೇಳಿದರು.</p>.<p>ಭೌತಿಕ ರ್ಯಾಲಿ ನಿಷೇಧದ ಹಿಂದೆ ಬಿಜೆಪಿ ಇದೆ. ಆ ಪಕ್ಷದ ಚುನಾವಣಾ ಸಿದ್ಧತೆಗಳೆಲ್ಲ ಮುಗಿದಿವೆ. ಹಾಗಾಗಿ ರ್ಯಾಲಿಗೆ ನಿಷೇಧ ಇರುವಂತೆ ಬಿಜೆಪಿ ನೋಡಿಕೊಂಡಿದೆ. ಆದರೆ, ಎಸ್ಪಿ ಮತ್ತು ಅದರ ಮಿತ್ರ ಪಕ್ಷಗಳು ಡಿಜಿಟಲ್ ವೇದಿಕೆಗಳ ಮೂಲಕ ಜನರನ್ನು ತಲುಪುತ್ತಿವೆ ಎಂದು ಅಖಿಲೇಶ್ ಹೇಳಿದ್ಧಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ‘300 ಯೂನಿಟ್ ಉಚಿತ ವಿದ್ಯುತ್’ ಪಡೆಯಲು ಆಸಕ್ತಿ ಇರುವವರ ನೋಂದಣಿಗೆ ಸಮಾಜವಾದಿ<br />ಪಕ್ಷವು (ಎಸ್ಪಿ) ಮನೆ ಮನೆ ಅಭಿಯಾನವನ್ನು ಮಂಗಳವಾರ ಆರಂಭಿಸಿದೆ. ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವ ‘ಸಂಕಲ್ಪ’ ತೊಟ್ಟ ಮರು ದಿನವೇ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಈ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ಧಾರೆ. ಎಸ್ಪಿ ಅಧಿಕಾರಕ್ಕೆ ಬಂದರೆ ‘300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು’ ಎಂಬುದು ಎಸ್ಪಿಯ ಭರವಸೆಗಳಲ್ಲಿ ಒಂದಾಗಿದೆ.</p>.<p>ವಿದ್ಯುತ್ ಬಳಸುತ್ತಿರುವ ಪ್ರತಿ ಮನೆಗೂ ಎಸ್ಪಿ ಕಾರ್ಯಕರ್ತರು ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಲಿದ್ದಾರೆ ಎಂದು ಅಖಿಲೇಶ್ ಹೇಳಿದ್ದಾರೆ.</p>.<p>‘ಪಾತಕಿ’ಯೊಬ್ಬರಿಗೆ ಪಕ್ಷದ ಟಿಕೆಟ್ ನೀಡುವ ಮೂಲಕ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ನು ಎಸ್ಪಿ ಉಲ್ಲಂಘಿಸಿದೆ. ಹಾಗಾಗಿ, ಆ ಪಕ್ಷದ ಮಾನ್ಯತೆ ರದ್ದುಪಡಿಸಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಅಪರಾಧಿಗಳಿದ್ದಾರೆ. ಹಾಗಾಗಿ, ಮೊದಲಿಗೆ ಆ ಪಕ್ಷದ ಮಾನ್ಯತೆ ರದ್ದುಪಡಿಸಬೇಕು ಎಂದು ಹೇಳಿದ್ದಾರೆ.</p>.<p>‘ಮುಖ್ಯಮಂತ್ರಿಯ ವಿರುದ್ಧ ಅಪರಾಧ ಪ್ರಕರಣ ಇದೆ. ಉಪ ಮುಖ್ಯಮಂತ್ರಿ ವಿರುದ್ಧವೂ ಅಪರಾಧ ಪ್ರಕರಣ ಇದೆ. ಹಾಗಾಗಿ, ಬಿಜೆಪಿಯ ಮಾನ್ಯತೆ ರದ್ದುಪಡಿಸಬೇಕು’ ಎಂದು ಅವರು ಹೇಳಿದ್ಧಾರೆ.</p>.<p>ರಾಂಪುರದ ಅಧಿಕಾರಿಯೊಬ್ಬರಿಗೆ ‘ಸರದಿ ತಪ್ಪಿಸಿ’ ಬಡ್ತಿ ಬೇಕಿತ್ತು. ಹಾಗಾಗಿ, ಆ ಅಧಿಕಾರಿಯು ಎಸ್ಪಿ ಮುಖಂಡ ಆಜಂ ಖಾನ್ ಮತ್ತು ಅವರ ಮಗ ಅಬ್ದುಲ್ಲಾ ಆಜಂ ವಿರುದ್ಧ ಹತ್ತಾರು ಪ್ರಕರಣ ದಾಖಲಿಸಿದ್ಧಾರೆ ಎಂದು ಹೇಳಿದರು.</p>.<p>ಭೌತಿಕ ರ್ಯಾಲಿ ನಿಷೇಧದ ಹಿಂದೆ ಬಿಜೆಪಿ ಇದೆ. ಆ ಪಕ್ಷದ ಚುನಾವಣಾ ಸಿದ್ಧತೆಗಳೆಲ್ಲ ಮುಗಿದಿವೆ. ಹಾಗಾಗಿ ರ್ಯಾಲಿಗೆ ನಿಷೇಧ ಇರುವಂತೆ ಬಿಜೆಪಿ ನೋಡಿಕೊಂಡಿದೆ. ಆದರೆ, ಎಸ್ಪಿ ಮತ್ತು ಅದರ ಮಿತ್ರ ಪಕ್ಷಗಳು ಡಿಜಿಟಲ್ ವೇದಿಕೆಗಳ ಮೂಲಕ ಜನರನ್ನು ತಲುಪುತ್ತಿವೆ ಎಂದು ಅಖಿಲೇಶ್ ಹೇಳಿದ್ಧಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>