ಗೋರಖ್ಪುರ: ಉತ್ತಮ ಮಳೆಯಾಗುವಂತೆ ಕೋರಿಕೆ ಸಲ್ಲಿಸಿ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಜೋಡಿ ಕಪ್ಪೆಗಳಿಗೆ ಮದುವೆ ಮಾಡಿಸಲಾಗಿದೆ.
ಹಿಂದೂ ಮಹಾಸಭಾ ಸಂಘಟನೆಯು ಮದುವೆಯ ಎಲ್ಲ ಕಾರ್ಯಗಳನ್ನು ನಿರ್ವಹಿಸಿದೆ. ಗೋರಖ್ಪುರದ ಕಾಳಿಬರಿ ದೇವಸ್ಥಾನದಲ್ಲಿ ಮದುವೆ ನಡೆದಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಈ ಪ್ರದೇಶದಲ್ಲಿ ಬರಪೀಡಿತ ಸನ್ನಿವೇಶವಿದೆ. ಮಳೆಗಾಲವಾದರೂ, ಸಾಕಷ್ಟು ಮಳೆ ಸುರಿದಿಲ್ಲ. ಹೀಗಾಗಿ ಕಪ್ಪೆಗಳಿಗೆ ಮದುವೆ ಮಾಡಿಸಲಾಗಿದೆ ಎಂದು ಹಿಂದೂ ಮಹಾಸಭಾದ ರಮಾಕಾಂತ್ ವರ್ಮಾ ತಿಳಿಸಿದ್ದಾರೆ.