ಪಣಜಿ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಉತ್ಪಲ್ ಕೇಳಿಕೊಂಡಿದ್ದರು. ಅದನ್ನು ಬಿಜೆಪಿ ನಿರಾಕರಿಸಿತ್ತು. ಬದಲಿಗೆ ಬೇರೆ ಎರಡು ಕ್ಷೇತ್ರಗಳ ಆಯ್ಕೆ ನೀಡುವುದಾಗಿ ಹೇಳಿತ್ತು. ಗೋವಾ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡಣವೀಸ್ ಅವರು, ‘ಉತ್ಪಲ್ಗೆ ಆ ಸಾಮರ್ಥ್ಯವಿಲ್ಲ. ಅವರು ಪಕ್ಷಕ್ಕಾಗಿ ಇನ್ನೂ ದುಡಿಯಬೇಕು’ ಎಂದು ಹೇಳಿದ್ದರು.