<p><strong>ಪಣಜಿ:</strong> ಸಂಭಾವ್ಯ ಕೋವಿಡ್-19 ಮೂರನೇ ಅಲೆ ಸಂದರ್ಭದಲ್ಲಿ ಜನರಿಗೆ ನೆರವು ನೀಡುವುದಕ್ಕಾಗಿ38 ವಿಧಾನಸಭೆ ಕ್ಷೇತ್ರಗಳ 2,571 ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ ಎಂದು ಗೋವಾ ಬಿಜೆಪಿ ತಿಳಿಸಿದೆ.</p>.<p>ʼ40ವಿಧಾನಸಭೆ ಕ್ಷೇತ್ರಗಳ ಪೈಕಿ38 ಕ್ಷೇತ್ರಗಳ 3,243 ಬೂತ್ ಮಟ್ಟದಕಾರ್ಯಕರ್ತರಲ್ಲಿ2,571 ಮಂದಿಗೆ (ಶೇ86)ರಾಷ್ಟ್ರೀಯ ಆರೋಗ್ಯ ಸ್ವಯಂಸೇವಕರಅಭಿಯಾನದ ಭಾಗವಾಗಿ ಗೋವಾ ಬಿಜೆಪಿ ವೈದ್ಯಕೀಯ ಘಟಕವು ತರಬೇತಿ ನೀಡಿದೆ. ಕೋವಿಡ್ ಮೂರನೇ ಅಲೆ ನಿಯಂತ್ರಣದ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ, ಹೆಚ್ಚುವರಿಯಾಗಿ150 ತರಬೇತುದಾರರಿಗೂ ತರಬೇತಿ ನೀಡಲಾಗಿದೆʼ ಎಂದು ಬಿಜೆಪಿ ವೈದ್ಯಕೀಯ ವಿಭಾಗದ ಉಸ್ತುವಾರಿ ಡಾ. ಶೇಖರ್ ಸಾಲ್ಕರ್ ತಿಳಿಸಿದ್ದಾರೆ.</p>.<p>ಗಣೇಶ ಚತುರ್ಥಿಯ ಬಳಿಕ ಉಳಿದ ಎರಡು ಕ್ಷೇತ್ರಗಳಲ್ಲೂ ಅಭಿಯಾನ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.</p>.<p>ʼಕೊರಾನಾವೈರಸ್ ಏನು,ಕೋವಿಡ್ನ ಸ್ವಭಾವ ಎಂಥದು,ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ,ಸರಿಯಾದ ಆಹಾರ ಕ್ರಮ-ಯೋಗ, ಮೂರನೇ ಅಲೆ ನಿಯಂತ್ರಣ ಸೇರಿದಂತೆ ತರಬೇತಿಯು ಎಲ್ಲ ಆಯಾಮಗಳನ್ನೂ ಒಳಗೊಂಡಿದೆ. ಮಾಸ್ಕ್ ಧರಿಸುವುದು, ಬಳಸಿದ ಮಾಸ್ಕ್ ವಿಲೇವಾರಿ ಮಾಡುವುದು ಹೇಗೆ, ಪಲ್ಸ್ ಆಕ್ಸಿಮೀಟರ್ ಮತ್ತು ಥರ್ಮಲ್ ಗನ್ ಬಳಸುವುದು ಹೇಗೆ ಎಂಬುದನ್ನೂ ತಿಳಿಸಿಕೊಡಲಾಗಿದೆʼ ಎಂದು ಸಾಲ್ಕರ್ ಹೇಳಿದ್ದಾರೆ.</p>.<p>ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಪಣಜಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಆರೋಗ್ಯ ಸ್ವಯಂಸೇವಕರ ಅಭಿಯಾನಕ್ಕೆ ಆಗಸ್ಟ್8ರಂದುಚಾಲನೆ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಣಜಿ:</strong> ಸಂಭಾವ್ಯ ಕೋವಿಡ್-19 ಮೂರನೇ ಅಲೆ ಸಂದರ್ಭದಲ್ಲಿ ಜನರಿಗೆ ನೆರವು ನೀಡುವುದಕ್ಕಾಗಿ38 ವಿಧಾನಸಭೆ ಕ್ಷೇತ್ರಗಳ 2,571 ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ ಎಂದು ಗೋವಾ ಬಿಜೆಪಿ ತಿಳಿಸಿದೆ.</p>.<p>ʼ40ವಿಧಾನಸಭೆ ಕ್ಷೇತ್ರಗಳ ಪೈಕಿ38 ಕ್ಷೇತ್ರಗಳ 3,243 ಬೂತ್ ಮಟ್ಟದಕಾರ್ಯಕರ್ತರಲ್ಲಿ2,571 ಮಂದಿಗೆ (ಶೇ86)ರಾಷ್ಟ್ರೀಯ ಆರೋಗ್ಯ ಸ್ವಯಂಸೇವಕರಅಭಿಯಾನದ ಭಾಗವಾಗಿ ಗೋವಾ ಬಿಜೆಪಿ ವೈದ್ಯಕೀಯ ಘಟಕವು ತರಬೇತಿ ನೀಡಿದೆ. ಕೋವಿಡ್ ಮೂರನೇ ಅಲೆ ನಿಯಂತ್ರಣದ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ, ಹೆಚ್ಚುವರಿಯಾಗಿ150 ತರಬೇತುದಾರರಿಗೂ ತರಬೇತಿ ನೀಡಲಾಗಿದೆʼ ಎಂದು ಬಿಜೆಪಿ ವೈದ್ಯಕೀಯ ವಿಭಾಗದ ಉಸ್ತುವಾರಿ ಡಾ. ಶೇಖರ್ ಸಾಲ್ಕರ್ ತಿಳಿಸಿದ್ದಾರೆ.</p>.<p>ಗಣೇಶ ಚತುರ್ಥಿಯ ಬಳಿಕ ಉಳಿದ ಎರಡು ಕ್ಷೇತ್ರಗಳಲ್ಲೂ ಅಭಿಯಾನ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.</p>.<p>ʼಕೊರಾನಾವೈರಸ್ ಏನು,ಕೋವಿಡ್ನ ಸ್ವಭಾವ ಎಂಥದು,ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ,ಸರಿಯಾದ ಆಹಾರ ಕ್ರಮ-ಯೋಗ, ಮೂರನೇ ಅಲೆ ನಿಯಂತ್ರಣ ಸೇರಿದಂತೆ ತರಬೇತಿಯು ಎಲ್ಲ ಆಯಾಮಗಳನ್ನೂ ಒಳಗೊಂಡಿದೆ. ಮಾಸ್ಕ್ ಧರಿಸುವುದು, ಬಳಸಿದ ಮಾಸ್ಕ್ ವಿಲೇವಾರಿ ಮಾಡುವುದು ಹೇಗೆ, ಪಲ್ಸ್ ಆಕ್ಸಿಮೀಟರ್ ಮತ್ತು ಥರ್ಮಲ್ ಗನ್ ಬಳಸುವುದು ಹೇಗೆ ಎಂಬುದನ್ನೂ ತಿಳಿಸಿಕೊಡಲಾಗಿದೆʼ ಎಂದು ಸಾಲ್ಕರ್ ಹೇಳಿದ್ದಾರೆ.</p>.<p>ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಪಣಜಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಆರೋಗ್ಯ ಸ್ವಯಂಸೇವಕರ ಅಭಿಯಾನಕ್ಕೆ ಆಗಸ್ಟ್8ರಂದುಚಾಲನೆ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>