ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುವನೇಶ್ವರ: ನದಿಗೆ ಉರುಳಿದ ಗೂಡ್ಸ್ ಬೋಗಿಗಳು, ಗೋಧಿ ನೀರುಪಾಲು

Last Updated 14 ಸೆಪ್ಟೆಂಬರ್ 2021, 6:35 IST
ಅಕ್ಷರ ಗಾತ್ರ

ಭುವನೇಶ್ವರ: ಅಂಗುಲ್‌–ತಾಲ್‌ಚೇರ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಈಸ್ಟ್‌ಕೋಸ್ಟ್‌ ರೈಲ್ವೆ ವಿಭಾಗದ ಗೂಡ್ಸ್‌ರೈಲಿನ ಆರು ಬೋಗಿಗಳು ಮಂಗಳವಾರ ಮುಂಜಾನೆ ಹಳಿ ತಪ್ಪಿ ನದಿಗೆ ಉರುಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋಧಿಯನ್ನು ಸಾಗಿಸುತ್ತಿದ್ದ ರೈಲಿನ ಆರು ಬೋಗಿಗಳು ಮುಂಜಾನೆ 2.30ರ ಸುಮಾರಿಗೆ ಹಳಿ ತಪ್ಪಿ ನದಿಗೆ ಉರುಳಿವೆ. ಆದರೆ, ರೈಲಿನ ಎಂಜಿನ್‌ ಹಳಿಯ ಮೇಲೆ ಇದ್ದಿದ್ದರಿಂದ, ಲೋಕೊ ಪೈಲಟ್ ಮತ್ತು ಇತರ ಸಿಬ್ಬಂದಿಗೆ ಯಾವುದೇ ತೊಂದರೆಯಾಗಿಲ್ಲ‘ ಎಂದು ಅವರು ಹೇಳಿದರು.

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಭಾರೀ ಮಳೆಯಾಗುತ್ತಿದ್ದರಿಂದ ಈ ಅಪಘಾತ ಸಂಭವಿಸಿದೆ. ಫಿರೋಜ್‌ಪುರ ದಿಂದ ಖುರ್ದಾ ರಸ್ತೆಯತ್ತ ಹೋಗುತ್ತಿದ್ದ ಈ ಗೂಡ್ಸ್‌ ರೈಲಿನ ಬೋಗಿಗಳು ನಂದಿರಾ ಸೇತುವೆಯ ಮೇಲೆ ಹಳಿ ತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ನಂತರ, ಈಸ್ಟ್‌ಕೋಸ್ಟ್ ರೈಲ್ವೆ ವಿಭಾಗ ಈ ಮಾರ್ಗದಲ್ಲಿ ಸಂಚರಿಸುವ 12 ರೈಲುಗಳನ್ನು ರದ್ದುಗೊಳಿಸಿತು. ಎಂಟು ರೈಲುಗಳಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚಿಸಿತು.

ಸೋಮವಾರ ತಾಲ್‌ಚೇರ್ ಪ್ರದೇಶದಲ್ಲಿ 160 ಮಿ.ಮೀ. ಮತ್ತು ಅಂಗುಲ್ ವ್ಯಾಪ್ತಿಯಲ್ಲಿ 74 ಮಿ.ಮೀ. ಮಳೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT