ಗುಜರಾತ್ ಮೊದಲ ಹಂತದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಏಳು ಬಂಡಾಯ ಮುಖಂಡರನ್ನು ಬಿಜೆಪಿ ಅಮಾನತುಗೊಳಿಸಲಾಗಿತ್ತು. ಈಗ ಪಕ್ಷದ ವಿಪ್ ಉಲ್ಲಂಘಿಸಿ ಎರಡನೇ ಹಂತದ ಚುನಾವಣೆಗಾಗಿ ನಾಮಪತ್ರ ಸಲ್ಲಿಸಿರುವ 12 ಮುಖಂಡರನ್ನು ಅಮಾನತು ಮಾಡಲಾಗಿದೆ.
ಇವರಲ್ಲಿ ಆರು ಬಾರಿಯ ಶಾಸಕ ಮಧು ಶ್ರೀವಾಸ್ತವ, ಮಾಜಿ ಶಾಸಕರಾದ ದಿನು ಪಟೇಲ್ ಹಾಗೂ ಧವಳ್ಸಿನ್ಹ್ ಝಾಲ, ಮುಖಂಡರಾದ ಕುಲದೀಪ್ಸಿಹ್ಹ್ ರೌಲ್, ಖಾತುಭಾಯಿ ಪಗಿ, ಎಸ್ಎಂ ಕಾಂತ್, ಜೆ.ಪಿ ಪಟೇಲ್, ರಮೇಶ್ ಝಾಲ, ಅಮರ್ಶಿ ಝಾಲ, ರಾಮ್ಸಿಂಗ್, ಮಾವ್ಜಿ ದೇಸಾಯಿ ಮತ್ತು ಲೆಬ್ಜಿ ಠಾಕೂರ್ ಸೇರಿದ್ದಾರೆ.