ವಾರಾಣಸಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ಇದೆ ಎಂದು ಹೇಳಲಾಗುವ ಶೃಂಗಾರ ಗೌರಿ ದೇಗುಲದಲ್ಲಿ ದಿನವೂ ಪೂಜೆ ಸಲ್ಲಿಸಲು ಅವಕಾಶ ಕೋರಿ ಸಲ್ಲಿಕೆಯಾಗಿರುವ ಅರ್ಜಿಯು ವಿಚಾರಣೆಗೆ ಅರ್ಹ ಎಂದು ವಾರಾಣಸಿ ಜಿಲ್ಲಾ ನ್ಯಾಯಾಲಯವು ನೀಡಿರುವ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ನಲ್ಲಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಸಂಬಂಧ ಅಜುಂಮಾನ್ ಇಂತೆಜಾಮಿಯಾ ಸಮಿತಿಯು ಹಿರಿಯ ವಕೀಲರನ್ನು ಭೇಟಿ ಮಾಡಿತು.
ಅಜುಂಮಾನ್ ಇಂತೆಜಾಮಿಯಾ ಸಮಿತಿಯು ನಗರದಲ್ಲಿನ ಜ್ಞಾನವಾಪಿ ಮಸೀದಿಯು ಸೇರಿದಂತೆ 22 ಮಸೀದಿಗಳನ್ನು ನಿರ್ವಹಿಸುತ್ತಿದೆ. ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಸಮಿತಿಯು ಮುಸ್ಲಿಮರ ಪರ ಇದೆ.
ಹಿಂದೂಪರ ವಕೀಲ ವಿಷ್ಣು ಜೈನ್, ‘ಮುಸ್ಲಿಮರ ಪರವಿರುವವರು ಹೈಕೋರ್ಟಿಗೆ ಹೋದರೆ, ನಾವೂ ಕೂಡ ಅಲ್ಲಿಗೆ ಹೋಗಿ, ಕೇವಿಯಟ್ ಸಲ್ಲಿಸುತ್ತೇವೆ ಎಂದಿದ್ದಾರೆ.