‘ನೀವು ಏನು ಮಾಡುತ್ತಿದ್ದೀರಿ? ಎಷ್ಟು ಜನರನ್ನು ಬಂಧಿಸಿದ್ದೀರಿ? ಎಷ್ಟು ಮಂದಿ ವಿಚಾರಣೆ ನಡೆಸಿದ್ದೀರಿ’ ಎಂದು ಪೀಠವು, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ ಅವರನ್ನೂ ಕಟುವಾಗಿ ಪ್ರಶ್ನಿಸಿತು. 2021ರ ಡಿಸೆಂಬರ್ 17 ರಿಂದ 19ರವರೆಗೆ ಹರಿದ್ವಾರದಲ್ಲಿ ನಡೆದ ‘ಧರ್ಮ ಸಂಸದ್’ ಮತ್ತು ಡಿಸೆಂಬರ್ 19ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದ್ವೇಷದ ಭಾಷಣ ಮಾಡಲಾಗಿದೆ.