‘ಜನರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ದೊರೆಯದಿರುವಾಗ ನೀವು ಹೇಗೆ ಇಂಥ ಆದೇಶ ನೀಡುತ್ತೀರಿ? ನಮ್ಮನ್ನು ಸಮಾಧಾನಪಡಿಸಲೆಂದು ಈ ನಿರ್ಧಾರವೇ? ನೀವು ಇಂಥ ವಿಶೇಷ ಸೌಲಭ್ಯ ಕಲ್ಪಿಸುವಂತಿಲ್ಲ. ನಾವು ಅದನ್ನು ಕೇಳಿಯೂ ಇಲ್ಲ’ ಎಂದು ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ರೇಖಾ ಪಳ್ಳಿ ಅವರಿದ್ದ ನ್ಯಾಯಪೀಠವು ಸರ್ಕಾರದ ಪರ ವಕೀಲ ರಾಹುಲ್ ಮೆಹ್ರಾ ಅವರನ್ನು ತರಾಟೆಗೆ ತೆಗೆದುಕೊಂಡಿದೆ.