<p><strong>ನವದೆಹಲಿ:</strong> ಪಶ್ಚಿಮ ಬಂಗಾಳದಲ್ಲಿ ಐದು ರೈಲ್ವೆ ಸೇತುವೆಗಳ ನಿರ್ಮಾಣಕ್ಕಾಗಿ ಕತ್ತರಿಸುತ್ತಿರುವ ಮುನ್ನೂರು ಪಾರಂಪರಿಕ ಮರಗಳ ಒಟ್ಟು ಮೌಲ್ಯ ಈ ಅಭಿವೃದ್ಧಿ ಯೋಜನೆಗಳ ಮೌಲ್ಯಕ್ಕಿಂತ ಅಧಿಕವಾಗಿದ್ದು, ಅವುಗಳನ್ನು ತೆರವುಗೊಳಿಸಬಾರದು ಎಂದು ತಜ್ಞರ ಸಮಿತಿಯೊಂದು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ.</p>.<p>ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಅವರನ್ನೊಳಗೊಂಡ ಪೀಠದ ಎದುರು ಈ ವಿವರವನ್ನು ಮಂಡಿಸಿದ ಐದು ಸದಸ್ಯರನ್ನೊಳಗೊಂಡ ತಜ್ಞರ ಸಮಿತಿ, ಪಾರಂಪರಿಕ ಮರಗಳು ಬೃಹದಾಕಾರದಲ್ಲಿರುತ್ತವೆ. ಈ ಮರಗಳು ಪರಿಪಕ್ವವಾಗಲು ದಶಕಗಳೋ, ಶತಮಾನಗಳೋ ಬೇಕಾಗುತ್ತದೆ. ಇವು ನಾಗರಿಕ ಸಮಾಜ ಮತ್ತು ಪರಿಸರಕ್ಕೆ ನೀಡುವ ಸೇವೆ ಬಹು ದೊಡ್ಡದು ಎಂದು ವಿವರಿಸಿದರು.</p>.<p>ವಾರ್ದಾದ ಸೆಂಟರ್ ಆಫ್ ಸೈನ್ಸ್ ಫಾರ್ ವಿಲೇಜ್ ಸಂಸ್ಥೆಯ ಡಾ. ಸೊಹಮ್ ಪಾಂಡ್ಯ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.</p>.<p>ಈ ಮರಗಳು ನೀಡುವ ಆಮ್ಲಜನಕ, ಮಣ್ಣಿಗೆ ನೀಡುವ ಸೂಕ್ಷ್ಮ ಪೋಷಕಾಂಶಗಳು, ಕಾಂಪೋಸ್ಟ್ ಮತ್ತು ಜೈವಿಕ ಗೊಬ್ಬರ ಮತ್ತಿತರ ವಸ್ತುಗಳ ಮೌಲ್ಯ ಲಕ್ಷ ಕೋಟಿಗಳಿಗೂ ಹೆಚ್ಚು ಎಂದು ಅಂದಾಜಿಸಬಹುದು. ಇಂಥ ಅಪರೂಪದ ಮರಗಳನ್ನು ಕತ್ತರಿಸುವುದರಿಂದ, ಪರಿಸರಕ್ಕೆ ತುಂಬಾ ನಷ್ಟವಾಗುತ್ತದೆ ಎಂದು ಸಮಿತಿ ತಿಳಿಸಿದೆ.</p>.<p>ಈಗ ಕತ್ತರಿಸುವ ಮರಗಳ ಉಳಿದ ಆಯಸ್ಸಿನ ಮೌಲ್ಯವನ್ನು ಲೆಕ್ಕಹಾಕಿದರೆ, ಪ್ರತಿ ವರ್ಷ ಒಂದು ಮರದಿಂದ ₹74,500 ಆದಾಯವಿದೆ. ಅಂದರೆ, 300 ಮರಗಳನ್ನು ನೂರು ವರ್ಷಗಳ ಅವಧಿವರೆಗೆ ಉಳಿಸಿದರೆ, ₹2,235,000,000 ಮೌಲ್ಯದ ಉತ್ಪನ್ನಗಳನ್ನು ನೀಡುತ್ತವೆ.</p>.<p>ಒಂದು ಪಕ್ಷ 59.2 ಕಿಲೋಮೀಟರ್ ರಸ್ತೆಯನ್ನು ಪರಿಗಣಿಸಿದರೆ, ಇನ್ನು ಒಂದು ದಶಕದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ, ಈ ರಸ್ತೆ ವಿಸ್ತರಿಸಬೇಕಾಗುತ್ತದೆ. ಆಗ ಅಧಿಕಾರಿಗಳು ರಸ್ತೆ ವಿಸ್ತರಣೆ ಮಾಡುತ್ತಾರೆ. ಆಗ 4,056 ಮರಗಳನ್ನು ಕಡಿಯಬೇಕಾಗುತ್ತದೆ ಎಂದು ತಜ್ಞರ ಸಮಿತಿ ಪೀಠಕ್ಕೆ ವಿವರಿಸಿದೆ.</p>.<p>ಆ ಪ್ರಕಾರ, 100 ವರ್ಷಗಳಲ್ಲಿ ಈ ಮರಗಳ ಮೌಲ್ಯ ₹30.21 ಬಿಲಿಯನ್. ಹೀಗಾಗಿ, ಇಂಥ ಬೃಹತ್ ಪರಿಸರ ವಿನಾಶವನ್ನು ತಪ್ಪಿಸಿ, ಈ ಅಭಿವೃದ್ಧಿ ಯೋಜನೆಗಳಿಗೆ ಪರ್ಯಾಯ ದಾರಿ ಹುಡುಕುವಂತೆ ತಜ್ಞರ ಸಮಿತಿ ಮನವಿ ಮಾಡಿದೆ.</p>.<p>ಐದು ಪ್ರಸ್ತಾವಿತ ರೈಲ್ವೆ ಸೇತುವೆಗಳು ‘ಸೇತು ಭಾರತಂ ಮೆಗಾ ಯೋಜನೆ‘ಯ ಭಾಗವಾಗಿದೆ. ದೇಶದ 19 ರಾಜ್ಯಗಳಲ್ಲಿ 208 ರೈಲ್ವೆ ಮೇಲು ಸೇತುವೆ ಮತ್ತು ಕೆಳಸೇತುವೆಗಳನ್ನು ಈ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ₹20,800 ಕೋಟಿ ಅನುದಾನ ನೀಡಿದೆ.</p>.<p>‘ಈ ಮಹತ್ವದ ಯೋಜನೆಯನ್ನು ಕಾರ್ಯಗತಗೊಳಿಸಲು ಪರಿಸರ ಪರಿಣಾಮದ ಮೌಲ್ಯಮಾಪನ(ಇಐಎ) ಮಾಡಬೇಕಾಗಿದೆ. ಪಶ್ಚಿಮ ಬಂಗಾಳದಲ್ಲಿ ಈ ಮೌಲ್ಯಮಾಪನವಾಗಿಲ್ಲ‘ ಎಂದು ಐದು ಸದಸ್ಯರ ಸಮಿತಿ ಸುಪ್ರೀಂ ಕೋರ್ಟ್ಗೆ ತಿಳಿಸಿತು.</p>.<p>‘ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಸುತ್ತೋಲೆ ಪ್ರಕಾರ, 100ಕಿ.ಮೀ ಗಿಂತ ಕಡಿಮೆ ಉದ್ದದ ರಸ್ತೆಗೆ ಪರಿಸರ ಪರಿಣಾಮ ಮೌಲ್ಯಮಾಪನದ ಅಗತ್ಯವಿಲ್ಲ. ಯೋಜನೆಗೆ ಭೂಮಿ ನೀಡುವುದನ್ನು ತಪ್ಪಿಸುವುದಕ್ಕಾಗಿ ಇಂಥ ವಾದ ಮಂಡಿಸಲಾಗುತ್ತಿದೆ‘ ಎಂದು ಸರ್ಕಾರ ತಿಳಿಸಿದೆ</p>.<p>ನ್ಯಾಯಪೀಠ ಈ ವಿಚಾರಣೆಯನ್ನು ಫೆ.18ಕ್ಕೆ ಮುಂದೂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಪಶ್ಚಿಮ ಬಂಗಾಳದಲ್ಲಿ ಐದು ರೈಲ್ವೆ ಸೇತುವೆಗಳ ನಿರ್ಮಾಣಕ್ಕಾಗಿ ಕತ್ತರಿಸುತ್ತಿರುವ ಮುನ್ನೂರು ಪಾರಂಪರಿಕ ಮರಗಳ ಒಟ್ಟು ಮೌಲ್ಯ ಈ ಅಭಿವೃದ್ಧಿ ಯೋಜನೆಗಳ ಮೌಲ್ಯಕ್ಕಿಂತ ಅಧಿಕವಾಗಿದ್ದು, ಅವುಗಳನ್ನು ತೆರವುಗೊಳಿಸಬಾರದು ಎಂದು ತಜ್ಞರ ಸಮಿತಿಯೊಂದು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ.</p>.<p>ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಅವರನ್ನೊಳಗೊಂಡ ಪೀಠದ ಎದುರು ಈ ವಿವರವನ್ನು ಮಂಡಿಸಿದ ಐದು ಸದಸ್ಯರನ್ನೊಳಗೊಂಡ ತಜ್ಞರ ಸಮಿತಿ, ಪಾರಂಪರಿಕ ಮರಗಳು ಬೃಹದಾಕಾರದಲ್ಲಿರುತ್ತವೆ. ಈ ಮರಗಳು ಪರಿಪಕ್ವವಾಗಲು ದಶಕಗಳೋ, ಶತಮಾನಗಳೋ ಬೇಕಾಗುತ್ತದೆ. ಇವು ನಾಗರಿಕ ಸಮಾಜ ಮತ್ತು ಪರಿಸರಕ್ಕೆ ನೀಡುವ ಸೇವೆ ಬಹು ದೊಡ್ಡದು ಎಂದು ವಿವರಿಸಿದರು.</p>.<p>ವಾರ್ದಾದ ಸೆಂಟರ್ ಆಫ್ ಸೈನ್ಸ್ ಫಾರ್ ವಿಲೇಜ್ ಸಂಸ್ಥೆಯ ಡಾ. ಸೊಹಮ್ ಪಾಂಡ್ಯ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.</p>.<p>ಈ ಮರಗಳು ನೀಡುವ ಆಮ್ಲಜನಕ, ಮಣ್ಣಿಗೆ ನೀಡುವ ಸೂಕ್ಷ್ಮ ಪೋಷಕಾಂಶಗಳು, ಕಾಂಪೋಸ್ಟ್ ಮತ್ತು ಜೈವಿಕ ಗೊಬ್ಬರ ಮತ್ತಿತರ ವಸ್ತುಗಳ ಮೌಲ್ಯ ಲಕ್ಷ ಕೋಟಿಗಳಿಗೂ ಹೆಚ್ಚು ಎಂದು ಅಂದಾಜಿಸಬಹುದು. ಇಂಥ ಅಪರೂಪದ ಮರಗಳನ್ನು ಕತ್ತರಿಸುವುದರಿಂದ, ಪರಿಸರಕ್ಕೆ ತುಂಬಾ ನಷ್ಟವಾಗುತ್ತದೆ ಎಂದು ಸಮಿತಿ ತಿಳಿಸಿದೆ.</p>.<p>ಈಗ ಕತ್ತರಿಸುವ ಮರಗಳ ಉಳಿದ ಆಯಸ್ಸಿನ ಮೌಲ್ಯವನ್ನು ಲೆಕ್ಕಹಾಕಿದರೆ, ಪ್ರತಿ ವರ್ಷ ಒಂದು ಮರದಿಂದ ₹74,500 ಆದಾಯವಿದೆ. ಅಂದರೆ, 300 ಮರಗಳನ್ನು ನೂರು ವರ್ಷಗಳ ಅವಧಿವರೆಗೆ ಉಳಿಸಿದರೆ, ₹2,235,000,000 ಮೌಲ್ಯದ ಉತ್ಪನ್ನಗಳನ್ನು ನೀಡುತ್ತವೆ.</p>.<p>ಒಂದು ಪಕ್ಷ 59.2 ಕಿಲೋಮೀಟರ್ ರಸ್ತೆಯನ್ನು ಪರಿಗಣಿಸಿದರೆ, ಇನ್ನು ಒಂದು ದಶಕದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ, ಈ ರಸ್ತೆ ವಿಸ್ತರಿಸಬೇಕಾಗುತ್ತದೆ. ಆಗ ಅಧಿಕಾರಿಗಳು ರಸ್ತೆ ವಿಸ್ತರಣೆ ಮಾಡುತ್ತಾರೆ. ಆಗ 4,056 ಮರಗಳನ್ನು ಕಡಿಯಬೇಕಾಗುತ್ತದೆ ಎಂದು ತಜ್ಞರ ಸಮಿತಿ ಪೀಠಕ್ಕೆ ವಿವರಿಸಿದೆ.</p>.<p>ಆ ಪ್ರಕಾರ, 100 ವರ್ಷಗಳಲ್ಲಿ ಈ ಮರಗಳ ಮೌಲ್ಯ ₹30.21 ಬಿಲಿಯನ್. ಹೀಗಾಗಿ, ಇಂಥ ಬೃಹತ್ ಪರಿಸರ ವಿನಾಶವನ್ನು ತಪ್ಪಿಸಿ, ಈ ಅಭಿವೃದ್ಧಿ ಯೋಜನೆಗಳಿಗೆ ಪರ್ಯಾಯ ದಾರಿ ಹುಡುಕುವಂತೆ ತಜ್ಞರ ಸಮಿತಿ ಮನವಿ ಮಾಡಿದೆ.</p>.<p>ಐದು ಪ್ರಸ್ತಾವಿತ ರೈಲ್ವೆ ಸೇತುವೆಗಳು ‘ಸೇತು ಭಾರತಂ ಮೆಗಾ ಯೋಜನೆ‘ಯ ಭಾಗವಾಗಿದೆ. ದೇಶದ 19 ರಾಜ್ಯಗಳಲ್ಲಿ 208 ರೈಲ್ವೆ ಮೇಲು ಸೇತುವೆ ಮತ್ತು ಕೆಳಸೇತುವೆಗಳನ್ನು ಈ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ₹20,800 ಕೋಟಿ ಅನುದಾನ ನೀಡಿದೆ.</p>.<p>‘ಈ ಮಹತ್ವದ ಯೋಜನೆಯನ್ನು ಕಾರ್ಯಗತಗೊಳಿಸಲು ಪರಿಸರ ಪರಿಣಾಮದ ಮೌಲ್ಯಮಾಪನ(ಇಐಎ) ಮಾಡಬೇಕಾಗಿದೆ. ಪಶ್ಚಿಮ ಬಂಗಾಳದಲ್ಲಿ ಈ ಮೌಲ್ಯಮಾಪನವಾಗಿಲ್ಲ‘ ಎಂದು ಐದು ಸದಸ್ಯರ ಸಮಿತಿ ಸುಪ್ರೀಂ ಕೋರ್ಟ್ಗೆ ತಿಳಿಸಿತು.</p>.<p>‘ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಸುತ್ತೋಲೆ ಪ್ರಕಾರ, 100ಕಿ.ಮೀ ಗಿಂತ ಕಡಿಮೆ ಉದ್ದದ ರಸ್ತೆಗೆ ಪರಿಸರ ಪರಿಣಾಮ ಮೌಲ್ಯಮಾಪನದ ಅಗತ್ಯವಿಲ್ಲ. ಯೋಜನೆಗೆ ಭೂಮಿ ನೀಡುವುದನ್ನು ತಪ್ಪಿಸುವುದಕ್ಕಾಗಿ ಇಂಥ ವಾದ ಮಂಡಿಸಲಾಗುತ್ತಿದೆ‘ ಎಂದು ಸರ್ಕಾರ ತಿಳಿಸಿದೆ</p>.<p>ನ್ಯಾಯಪೀಠ ಈ ವಿಚಾರಣೆಯನ್ನು ಫೆ.18ಕ್ಕೆ ಮುಂದೂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>