<p><strong>ನವದೆಹಲಿ: </strong>ಉತ್ತರ ಪ್ರದೇಶದ ಹಾಥರಸ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ನ್ಯಾಯ ಪಡೆಯಲು ಅರ್ಹಳೇ ಹೊರತು ದೂಷಣೆಗೆ ಅಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.</p>.<p>ಈ ಕುರಿತು ಗುರುವಾರ ಟ್ವೀಟ್ ಮಾಡಿರುವ ಅವರು, ‘ದೌರ್ಜನ್ಯಕ್ಕೊಳಗಾದ ಮಹಿಳೆಯ ಚಾರಿತ್ರ್ಯ ಹರಣ ಮಾಡುವ ಅಭಿಪ್ರಾಯ ರೂಪಿಸುವುದು ಮತ್ತು ಅವಳ ಮೇಲಿನ ದೌರ್ಜನ್ಯಕ್ಕೆ ಹೇಗಾದರೂ ಅವಳನ್ನೇ ಹೊಣೆಗಾರಳನ್ನಾಗಿ ಮಾಡುವುದು ರೊಚ್ಚಿಗೇಳಿಸುವ, ಕೀಳುಮಟ್ಟದ ನಡವಳಿಕೆ,’ ಎಂದು ಪ್ರಿಯಾಂಕಾ ವಿಶ್ಲೇಷಿಸಿದ್ದಾರೆ.</p>.<p>‘ಹಾಥರಸ್ನಲ್ಲಿ ಅತ್ಯಂತ ಹೇಯ ಅಪರಾಧ ಸಂಭವಿಸಿದೆ. 20 ವರ್ಷದ ದಲಿತ ಯುವತಿ ಅಲ್ಲಿ ಸತ್ತಿದ್ದಾಳೆ. ಅವಳ ಕುಟುಂಬಸ್ಥರ ಪಾಲ್ಗೊಳ್ಳುವಿಕೆಯೇ ಇಲ್ಲದೇ ಅವಳ ಅಂತ್ಯಸಂಸ್ಕಾರವನ್ನೂ ಮಾಡಲಾಗಿದೆ. ಆಕೆ ನ್ಯಾಯ ಪಡೆಯಲು ಅರ್ಹಳೇ ಹೊರತು, ದೂಷಣೆಗೆ ಅಲ್ಲ,’ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.</p>.<p>‘ಬೇಶರ್ಮ್ ಬಿಜೆಪಿ’ (ನಿರ್ಲಜ್ಜ ಬಿಜೆಪಿ) ಹ್ಯಾಶ್ಟ್ಯಾಗ್ ಬಳಸುವ ಮೂಲಕ ಉತ್ತರ ಪ್ರದೇಶದ ಬಿಜೆಪಿ ಮುಖಂಡರನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹ್ಯಾಶ್ಟ್ಯಾಗ್ ಟ್ವಿಟರ್ನಲ್ಲಿ ಗುರುವಾರ ಟ್ರೆಂಡಿಂಗ್ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಉತ್ತರ ಪ್ರದೇಶದ ಹಾಥರಸ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ನ್ಯಾಯ ಪಡೆಯಲು ಅರ್ಹಳೇ ಹೊರತು ದೂಷಣೆಗೆ ಅಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.</p>.<p>ಈ ಕುರಿತು ಗುರುವಾರ ಟ್ವೀಟ್ ಮಾಡಿರುವ ಅವರು, ‘ದೌರ್ಜನ್ಯಕ್ಕೊಳಗಾದ ಮಹಿಳೆಯ ಚಾರಿತ್ರ್ಯ ಹರಣ ಮಾಡುವ ಅಭಿಪ್ರಾಯ ರೂಪಿಸುವುದು ಮತ್ತು ಅವಳ ಮೇಲಿನ ದೌರ್ಜನ್ಯಕ್ಕೆ ಹೇಗಾದರೂ ಅವಳನ್ನೇ ಹೊಣೆಗಾರಳನ್ನಾಗಿ ಮಾಡುವುದು ರೊಚ್ಚಿಗೇಳಿಸುವ, ಕೀಳುಮಟ್ಟದ ನಡವಳಿಕೆ,’ ಎಂದು ಪ್ರಿಯಾಂಕಾ ವಿಶ್ಲೇಷಿಸಿದ್ದಾರೆ.</p>.<p>‘ಹಾಥರಸ್ನಲ್ಲಿ ಅತ್ಯಂತ ಹೇಯ ಅಪರಾಧ ಸಂಭವಿಸಿದೆ. 20 ವರ್ಷದ ದಲಿತ ಯುವತಿ ಅಲ್ಲಿ ಸತ್ತಿದ್ದಾಳೆ. ಅವಳ ಕುಟುಂಬಸ್ಥರ ಪಾಲ್ಗೊಳ್ಳುವಿಕೆಯೇ ಇಲ್ಲದೇ ಅವಳ ಅಂತ್ಯಸಂಸ್ಕಾರವನ್ನೂ ಮಾಡಲಾಗಿದೆ. ಆಕೆ ನ್ಯಾಯ ಪಡೆಯಲು ಅರ್ಹಳೇ ಹೊರತು, ದೂಷಣೆಗೆ ಅಲ್ಲ,’ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.</p>.<p>‘ಬೇಶರ್ಮ್ ಬಿಜೆಪಿ’ (ನಿರ್ಲಜ್ಜ ಬಿಜೆಪಿ) ಹ್ಯಾಶ್ಟ್ಯಾಗ್ ಬಳಸುವ ಮೂಲಕ ಉತ್ತರ ಪ್ರದೇಶದ ಬಿಜೆಪಿ ಮುಖಂಡರನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹ್ಯಾಶ್ಟ್ಯಾಗ್ ಟ್ವಿಟರ್ನಲ್ಲಿ ಗುರುವಾರ ಟ್ರೆಂಡಿಂಗ್ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>