ನವದೆಹಲಿ: ಉತ್ತರ ಪ್ರದೇಶದ ಹಾಥರಸ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ನ್ಯಾಯ ಪಡೆಯಲು ಅರ್ಹಳೇ ಹೊರತು ದೂಷಣೆಗೆ ಅಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಗುರುವಾರ ಟ್ವೀಟ್ ಮಾಡಿರುವ ಅವರು, ‘ದೌರ್ಜನ್ಯಕ್ಕೊಳಗಾದ ಮಹಿಳೆಯ ಚಾರಿತ್ರ್ಯ ಹರಣ ಮಾಡುವ ಅಭಿಪ್ರಾಯ ರೂಪಿಸುವುದು ಮತ್ತು ಅವಳ ಮೇಲಿನ ದೌರ್ಜನ್ಯಕ್ಕೆ ಹೇಗಾದರೂ ಅವಳನ್ನೇ ಹೊಣೆಗಾರಳನ್ನಾಗಿ ಮಾಡುವುದು ರೊಚ್ಚಿಗೇಳಿಸುವ, ಕೀಳುಮಟ್ಟದ ನಡವಳಿಕೆ,’ ಎಂದು ಪ್ರಿಯಾಂಕಾ ವಿಶ್ಲೇಷಿಸಿದ್ದಾರೆ.
‘ಹಾಥರಸ್ನಲ್ಲಿ ಅತ್ಯಂತ ಹೇಯ ಅಪರಾಧ ಸಂಭವಿಸಿದೆ. 20 ವರ್ಷದ ದಲಿತ ಯುವತಿ ಅಲ್ಲಿ ಸತ್ತಿದ್ದಾಳೆ. ಅವಳ ಕುಟುಂಬಸ್ಥರ ಪಾಲ್ಗೊಳ್ಳುವಿಕೆಯೇ ಇಲ್ಲದೇ ಅವಳ ಅಂತ್ಯಸಂಸ್ಕಾರವನ್ನೂ ಮಾಡಲಾಗಿದೆ. ಆಕೆ ನ್ಯಾಯ ಪಡೆಯಲು ಅರ್ಹಳೇ ಹೊರತು, ದೂಷಣೆಗೆ ಅಲ್ಲ,’ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.
‘ಬೇಶರ್ಮ್ ಬಿಜೆಪಿ’ (ನಿರ್ಲಜ್ಜ ಬಿಜೆಪಿ) ಹ್ಯಾಶ್ಟ್ಯಾಗ್ ಬಳಸುವ ಮೂಲಕ ಉತ್ತರ ಪ್ರದೇಶದ ಬಿಜೆಪಿ ಮುಖಂಡರನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹ್ಯಾಶ್ಟ್ಯಾಗ್ ಟ್ವಿಟರ್ನಲ್ಲಿ ಗುರುವಾರ ಟ್ರೆಂಡಿಂಗ್ ಆಗಿದೆ.
Creating a narrative that defames a woman’s character and holding her somehow responsible for crimes committed against her is revolting and regressive.
A heinous crime has been committed at Hathras, leaving a 20-year-old Dalit woman dead.