ಅಮೃತಸರ: ಅಮೃತಸರ: ‘ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಅವರು ಹುತಾತ್ಮರಾದಮಾರ್ಚ್ 23 ರ ದಿನಕ್ಕೆಸರ್ಕಾರಿ ರಜೆ ಘೋಷಿಸಲಾಗಿದೆ’ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.
1933 ಮಾರ್ಚ್ 23 ರಂದು ಲಾಹೋರ್ ಜೈಲಿನಲ್ಲಿ ಪಂಜಾಬ್ನಭಗತ್ ಸಿಂಗ್ ಹುತಾತ್ಮರಾಗಿದ್ದರು.
ಇತ್ತೀಚೆಗಷ್ಟೇ ಪ್ರಕಟಗೊಂಡ ಪಂಜಾಬ್ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಭಗವಂತ ಮಾನ್ ನೇತೃತ್ವದ ಎಎಪಿ 92 ಸೀಟುಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚಿಸಿತ್ತು.
ಭಗವಂತ್ ಮಾನ್ ಅವರು ಭಗತ್ ಸಿಂಗ್ ಅವರ ಹುಟ್ಟೂರಾದ ಖಾಟ್ಕರ್ ಕಲಾನ್ನಲ್ಲಿ ಮಾರ್ಚ್ 16 ರಂದು ಪ್ರಮಾಣವಚನ ಸ್ವೀಕರಿಸಿದ್ದರು.