<p><strong>ಜೊರ್ಹಾತ್/ಗುವಾಹಟಿ:</strong> ಬ್ರಹ್ಮಪುತ್ರ ನದಿಯಲ್ಲಿ ಪ್ರಯಾಣಿಕ ದೋಣಿಯೊಂದು ಬುಧವಾರ ಮುಳುಗಿದ್ದು, ಸುಮಾರು ನೂರು ಜನರು ಜಲಸಮಾಧಿಯಾಗಿರಬಹುದು ಎಂದು ಶಂಕಿಸಲಾಗಿದೆ.</p>.<p>ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.</p>.<p>41 ಜನರನ್ನು ರಕ್ಷಿಸಲಾಗಿದ್ದು, ಇನ್ನುಳಿದವರಿಗಾಗಿ ಶೋಧ ನಡೆದಿದೆ. ಮೃತದೇಹಗಳ ಹುಡುಕಾಟ ನಡೆದಿದೆ ಎಂದು ಜೊರ್ಹಾತ್ ಜಿಲ್ಲಾಧಿಕಾರಿ ಅಶೋಕ ಬರ್ಮನ್ ತಿಳಿಸಿದ್ದಾರೆ.</p>.<p>120ಕ್ಕೂ ಹೆಚ್ಚು ಪ್ರಯಾಣಿಕರಿದ್ದ ದೋಣಿಯು ನಿಮತಿ ಘಾಟ್ನಿಂದ ಮಾಜುಲಿ ದ್ವೀಪದತ್ತ ತೆರಳುತ್ತಿತ್ತು. ಸರ್ಕಾರದ ಒಡೆತನದ ಸ್ಟೀಮ್ ದೋಣಿಯು ಮಾಜುಲಿಯಿಂದ ವಾಪಸ್ಸಾಗುತ್ತಿತ್ತು. ಇವೆರಡೂ ಪರಸ್ಪರ ಡಿಕ್ಕಿಯಾಗಿದ್ದರಿಂದ, ಪ್ರಯಾಣಿಕರ ದೋಣಿ ಮುಳುಗಿದೆ.</p>.<p>ದೋಣಿಯಲ್ಲಿ ವಾಹನಗಳನ್ನೂ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.</p>.<p>ಮೃತಪಟ್ಟವರ ಸಂಖ್ಯೆ ನಿಖರವಾಗಿ ಗೊತ್ತಿಲ್ಲ ಎಂದು ಜಿಲ್ಲಾ ಆಡಳಿತದ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ, ರಕ್ಷಣಾ ಕಾರ್ಯದ ಬಗ್ಗೆ ನಿಗಾ ವಹಿಸುವಂತೆ ಮಾಜುಲಿ ಹಾಗೂ ಜೋರ್ಹಾತ್ ಜಿಲ್ಲಾ ಆಡಳಿತಕ್ಕೆ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೊರ್ಹಾತ್/ಗುವಾಹಟಿ:</strong> ಬ್ರಹ್ಮಪುತ್ರ ನದಿಯಲ್ಲಿ ಪ್ರಯಾಣಿಕ ದೋಣಿಯೊಂದು ಬುಧವಾರ ಮುಳುಗಿದ್ದು, ಸುಮಾರು ನೂರು ಜನರು ಜಲಸಮಾಧಿಯಾಗಿರಬಹುದು ಎಂದು ಶಂಕಿಸಲಾಗಿದೆ.</p>.<p>ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.</p>.<p>41 ಜನರನ್ನು ರಕ್ಷಿಸಲಾಗಿದ್ದು, ಇನ್ನುಳಿದವರಿಗಾಗಿ ಶೋಧ ನಡೆದಿದೆ. ಮೃತದೇಹಗಳ ಹುಡುಕಾಟ ನಡೆದಿದೆ ಎಂದು ಜೊರ್ಹಾತ್ ಜಿಲ್ಲಾಧಿಕಾರಿ ಅಶೋಕ ಬರ್ಮನ್ ತಿಳಿಸಿದ್ದಾರೆ.</p>.<p>120ಕ್ಕೂ ಹೆಚ್ಚು ಪ್ರಯಾಣಿಕರಿದ್ದ ದೋಣಿಯು ನಿಮತಿ ಘಾಟ್ನಿಂದ ಮಾಜುಲಿ ದ್ವೀಪದತ್ತ ತೆರಳುತ್ತಿತ್ತು. ಸರ್ಕಾರದ ಒಡೆತನದ ಸ್ಟೀಮ್ ದೋಣಿಯು ಮಾಜುಲಿಯಿಂದ ವಾಪಸ್ಸಾಗುತ್ತಿತ್ತು. ಇವೆರಡೂ ಪರಸ್ಪರ ಡಿಕ್ಕಿಯಾಗಿದ್ದರಿಂದ, ಪ್ರಯಾಣಿಕರ ದೋಣಿ ಮುಳುಗಿದೆ.</p>.<p>ದೋಣಿಯಲ್ಲಿ ವಾಹನಗಳನ್ನೂ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.</p>.<p>ಮೃತಪಟ್ಟವರ ಸಂಖ್ಯೆ ನಿಖರವಾಗಿ ಗೊತ್ತಿಲ್ಲ ಎಂದು ಜಿಲ್ಲಾ ಆಡಳಿತದ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ, ರಕ್ಷಣಾ ಕಾರ್ಯದ ಬಗ್ಗೆ ನಿಗಾ ವಹಿಸುವಂತೆ ಮಾಜುಲಿ ಹಾಗೂ ಜೋರ್ಹಾತ್ ಜಿಲ್ಲಾ ಆಡಳಿತಕ್ಕೆ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>