'ಶನಿವಾರ, ದಿಲ್ಲಿ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಿಂದ ವಿಮಾನ ಹಾರಾಟ ನಿಯಂತ್ರಣ ಕೇಂದ್ರ(ಎಒಸಿಸಿ) ಕ್ಕೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸುವ ಬೆದರಿಕೆಯುಳ್ಳ ಇ-ಮೇಲ್ ಸ್ವೀಕರಿಸಲಾಗಿದೆ. ಅಲ್ ಕೈದಾ ಸರ್ಗಾನಾ ಉಗ್ರರು ಬಾಂಬ್ ಇರಿಸಲು ಯೋಜನೆ ರೂಪಿಸಿರುವ ಬಗ್ಗೆ ಸಂದೇಶವಿದೆ. ಸಿಂಗಪುರದಿಂದ ಕರಣ್ಬಿರ್ ಸುರಿ ಅಲಿಯಾಸ್ ಮೊಹಮದ್ ಜಲಾಲ್ ಮತ್ತು ಆತನ ಪತ್ನಿ ಶೈಲಿ ಶರ್ದಾ ಅಲಿಯಾಸ್ ಹಸೀನಾ ಭಾನುವಾರ ದೆಹಲಿಗೆ ಬರುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ 1-3 ದಿನಗಳಲ್ಲಿ ಬಾಂಬ್ ಇರಿಸುವ ಕುತಂತ್ರ ನಡೆದಿದೆ' ಎಂದು ಐಜಿಐ ಪೊಲೀಸ್ ತಿಳಿಸಿರುವುದಾಗಿ ಎಎನ್ಐ ಟ್ವೀಟ್ನಲ್ಲಿ ಹೇಳಿದೆ.