ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ಮೂಡಿರುವ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸುವ ಕ್ರಮವಾಗಿ ಸೇನಾ ಕಮಾಂಡರ್ಗಳ ಹಂತದಲ್ಲಿ ಮಂಗಳವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಯಿತು.
ಪೂರ್ವ ಲಡಾಖ್ನಲ್ಲಿ ಗಡಿ ನಿಯಂತ್ರಣ ರೇಖೆಯ ಭಾರತೀಯ ಭೂಭಾಗದಲ್ಲಿ ಇರುವ ಚುಶುಲ್ ನಲ್ಲಿ ಮಾತುಕತೆ ನಡೆದಿದ್ದು, ಪಾಂಗಾಂಗ್ ಸರೋವರ ವಿಷಯಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪಾಂಗಾಂಗ್ ಸರೋವರ ಸಮೀಪ ಯಥಾಸ್ಥಿತಿಯಯನ್ನು ಉಲ್ಲಂಘಿಸಲು ಚೀನಾ ಸೈನಿಕರು ಮುಂದಾಗಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಚೀನಾ ಸೇನಯಈ ಯತ್ನದಿಂದಾಗಿ ಭಾರತೀಯ ಸೇನೆಯು ಗಡಿಯಲ್ಲಿ ತನ್ನ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಿದೆ. ಸೇನೆ ಮುಖ್ಯಸ್ಥ ಎಂ.ಎಂ.ನರವಣೆಅವರೇ ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.