ಪೂರ್ವ ಲಡಾಖ್ಗೆ ಭೇಟಿ ನೀಡಿರುವ ರಾಜನಾಥ್ ಸಿಂಗ್ ಅವರು ಸೋಮವಾರ ಕಾರ್ಯಕ್ರಮ ವೊಂದರಲ್ಲಿ ಮಾತನಾಡುತ್ತಾ ‘ನೆರೆಯ ರಾಷ್ಟ್ರಗಳೊಂದಿಗಿರುವ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ನಡೆಯಬೇಕು. ಅದೇ ರೀತಿ, ಸಮಸ್ಯೆಗೆ ಪರಿಹಾರ ಹುಡುಕುವ ಬದಲು, ಯಾರಾದರೂ ಬೆದರಿಕೆ ಹಾಕಲು ಪ್ರಯತ್ನಿಸಿದರೆ, ಅದನ್ನು ಭಾರತ ಸಹಿಸುವುದಿಲ್ಲ‘ ಎಂದು ಅವರು ಎಚ್ಚರಿಸಿದರು.