ಎನ್ಸಿಡಿಆರ್ಸಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಭಾರತೀಯ ಜೀವವಿಮಾ ನಿಗಮ ಅರ್ಜಿ ಸಲ್ಲಿಸಿತ್ತು. ಉಲ್ಲೇಖಿತ ಪ್ರಕರಣದಲ್ಲಿ ಮಹಿಳೆಯ ಪತಿ ಜೀವನ್ ಸುರಕ್ಷಾ ಯೋಜನೆಯಡಿ ವಿಮೆ ಪಾಲಿಸಿ ಪಡೆದಿದ್ದು, ನಿಗಮವು ₹3.75 ಲಕ್ಷದ ಖಾತರಿನೀಡಿತ್ತು. ಅಲ್ಲದೆ ಅಪಘಾತದಲ್ಲಿ ಸಾವು ಸಂಭವಿಸಿದ್ದಲ್ಲಿ ಹೆಚ್ಚುವರಿ ₹3.75 ಲಕ್ಷ ನೀಡುವ ಖಾತರಿ ನೀಡಿತ್ತು. ಆರು ತಿಂಗಳಿಗೆ ಒಮ್ಮೆ ಪ್ರೀಮಿಯಂ ಪಾವತಿಸಬೇಕಿದ್ದು, ಬಾಕಿ ಉಳಿದಿತ್ತು. ಪತಿ ಅಪಘಾತದಿಂದ ಮಾರ್ಚ್ 21, 2012ರಂದು ಮೃತಪಟ್ಟಿದ್ದರು.