<p class="title"><strong>ತಿರುವನಂತಪುರ</strong>: ‘ಸಂಬಂಧಿಗೆ ಉದ್ಯೋಗವನ್ನು ಕೊಡಿಸಲು ಸಚಿವ ಸ್ಥಾನದ ಪ್ರಭಾವ ಬಳಸಿರುವ ಬಗ್ಗೆ ಲೋಕಾಯುಕ್ತರಿಂದ ಪ್ರತಿಕೂಲ ವರದಿ ಇದ್ದರೂ, ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಅವರು ತಕ್ಷಣಕ್ಕೆ ರಾಜೀನಾಮೆ ಕೊಡುವುದಿಲ್ಲ’ ಎಂದು ಕಾನೂನು ಸಚಿವ ಎ.ಕೆ.ಬಾಲನ್ ಅವರು ತಿಳಿಸಿದ್ದಾರೆ.</p>.<p class="title">‘ಜಲೀಲ್ ಅವರಿಗೆ ವಿವಿಧ ಕಾನೂನು ಆಯ್ಕೆಗಳಿವೆ. ಲೋಕಾಯುಕ್ತ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತರಬಹುದು. ಅಲ್ಲದೆ, ಲೋಕಾಯುಕ್ತ ವರದಿ ಆಧರಿಸಿ ಕ್ರಮಕೈಗೊಳ್ಳಲು ಮುಖ್ಯಮಂತ್ರಿಗೆ ಮೂರು ತಿಂಗಳ ಅವಕಾಶವಿದೆ‘ ಎಂದು ಅವರು ಶನಿವಾರ ಹೇಳಿದರು.</p>.<p class="title">ಲೋಕಾಯುಕ್ತ ಅವರ ವರದಿ ಹಿನ್ನೆಲೆಯಲ್ಲಿ ಜಲೀಲ್ ಅವರು ತಕ್ಷಣವೇ ರಾಜೀನಾಮೆ ಕೊಡಬೇಕು ಎಂದು ಈಗ ಒತ್ತಾಯಿಸುತ್ತಿರುವರು, ರಾಜ್ಯದಲ್ಲಿ ಅಂತಹ ಯಾವುದೇ ನಿದರ್ಶನವಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಕೆಳಹಂತದ ಕೋರ್ಟ್ ಅಭಿಪ್ರಾಯ ಆಧರಿಸಿ ಯಾರಾದರೂ ರಾಜೀನಾಮೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.</p>.<p class="title">ಜಲೀಲ್ ಅವರ ಸಂಬಂಧಿ ಕೆ.ಟಿ.ಅದೀಬ್ ಅವರು ಅನುಕಂಪದ ಆಧಾರದಲ್ಲಿ ನೇಮಕವಾಗಿದ್ದಾರೆ. ಅವರು ಅರ್ಹರಿದ್ದರೆ, ಇಲ್ಲವೇ ಎಂಬುದನ್ನಷ್ಟೇ ಪರಿಶೀಲಿಸಬೇಕು. ಸಂಬಂಧಿಗಳು ನೇಮಕವಾಗಬಾರದು ಎಂದು ಯಾವುದೇ ಕಾಯ್ದೆಯೂ ಹೇಳಿಲ್ಲ ಎಂದು ಬಾಲನ್ ಅವರು ಸಮರ್ಥಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ತಿರುವನಂತಪುರ</strong>: ‘ಸಂಬಂಧಿಗೆ ಉದ್ಯೋಗವನ್ನು ಕೊಡಿಸಲು ಸಚಿವ ಸ್ಥಾನದ ಪ್ರಭಾವ ಬಳಸಿರುವ ಬಗ್ಗೆ ಲೋಕಾಯುಕ್ತರಿಂದ ಪ್ರತಿಕೂಲ ವರದಿ ಇದ್ದರೂ, ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಅವರು ತಕ್ಷಣಕ್ಕೆ ರಾಜೀನಾಮೆ ಕೊಡುವುದಿಲ್ಲ’ ಎಂದು ಕಾನೂನು ಸಚಿವ ಎ.ಕೆ.ಬಾಲನ್ ಅವರು ತಿಳಿಸಿದ್ದಾರೆ.</p>.<p class="title">‘ಜಲೀಲ್ ಅವರಿಗೆ ವಿವಿಧ ಕಾನೂನು ಆಯ್ಕೆಗಳಿವೆ. ಲೋಕಾಯುಕ್ತ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತರಬಹುದು. ಅಲ್ಲದೆ, ಲೋಕಾಯುಕ್ತ ವರದಿ ಆಧರಿಸಿ ಕ್ರಮಕೈಗೊಳ್ಳಲು ಮುಖ್ಯಮಂತ್ರಿಗೆ ಮೂರು ತಿಂಗಳ ಅವಕಾಶವಿದೆ‘ ಎಂದು ಅವರು ಶನಿವಾರ ಹೇಳಿದರು.</p>.<p class="title">ಲೋಕಾಯುಕ್ತ ಅವರ ವರದಿ ಹಿನ್ನೆಲೆಯಲ್ಲಿ ಜಲೀಲ್ ಅವರು ತಕ್ಷಣವೇ ರಾಜೀನಾಮೆ ಕೊಡಬೇಕು ಎಂದು ಈಗ ಒತ್ತಾಯಿಸುತ್ತಿರುವರು, ರಾಜ್ಯದಲ್ಲಿ ಅಂತಹ ಯಾವುದೇ ನಿದರ್ಶನವಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಕೆಳಹಂತದ ಕೋರ್ಟ್ ಅಭಿಪ್ರಾಯ ಆಧರಿಸಿ ಯಾರಾದರೂ ರಾಜೀನಾಮೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.</p>.<p class="title">ಜಲೀಲ್ ಅವರ ಸಂಬಂಧಿ ಕೆ.ಟಿ.ಅದೀಬ್ ಅವರು ಅನುಕಂಪದ ಆಧಾರದಲ್ಲಿ ನೇಮಕವಾಗಿದ್ದಾರೆ. ಅವರು ಅರ್ಹರಿದ್ದರೆ, ಇಲ್ಲವೇ ಎಂಬುದನ್ನಷ್ಟೇ ಪರಿಶೀಲಿಸಬೇಕು. ಸಂಬಂಧಿಗಳು ನೇಮಕವಾಗಬಾರದು ಎಂದು ಯಾವುದೇ ಕಾಯ್ದೆಯೂ ಹೇಳಿಲ್ಲ ಎಂದು ಬಾಲನ್ ಅವರು ಸಮರ್ಥಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>