ಮುಂಗಾರು ಅಧಿವೇಶನದಲ್ಲಿ ಪೆಗಾಸಸ್ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಪಕ್ಷಗಳು ನಡೆಸಿದ ಗದ್ದಲಕ್ಕೆ ಸಂಬಂಧಿಸಿ ಮಾತನಾಡಿದ ಗಡ್ಕರಿ, 'ಎಲ್ಲ ಪಕ್ಷಗಳು ಆತ್ಮಶೋಧನೆ ನಡೆಸಬೇಕು. ಇವತ್ತು ಪ್ರತಿಪಕ್ಷದಲ್ಲಿರುವವರು ನಾಳೆ ಆಡಳಿತಕ್ಕೆ ಬರಬಹುದು. ಇವತ್ತು ಆಡಳಿತ ನಡೆಸುತ್ತಿರುವವರು ನಾಳೆ ಪ್ರತಿಪಕ್ಷ ಸ್ಥಾನದಲ್ಲಿ ಕೂರಬಹುದು. ಕರ್ತವ್ಯ ಬದಲಾಗುತ್ತಿರುತ್ತದೆ. ನಾನೂ ಮಹಾರಾಷ್ಟ್ರದ ಅಸೆಂಬ್ಲಿಯಲ್ಲಿ ಹಲವು ವರ್ಷಗಳ ವರೆಗೆ ಪಕ್ಷವನ್ನು ಮುನ್ನೆಡೆಸಿದ್ದೇನೆ' ಎಂದರು.