‘ಶಿವಶಂಕರ್ (57) ಅವರನ್ನು ಅಸೌಖ್ಯ, ಬೆನ್ನು ನೋವು ಹಾಗೂ ತಲೆಸುತ್ತುವಿಕೆ ಕಾರಣ ಅಕ್ಟೋಬರ್ 16ರಂದು ಸಂಜೆ 6 ಗಂಟೆಗೆ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಕರೆತರುವ ವೇಳೆ ಅವರ ರಕ್ತದೊತ್ತಡ ಅತಿಯಾಗಿತ್ತು. ಇಸಿಜಿಯಲ್ಲಿ ಸಣ್ಣ ವ್ಯತ್ಯಾಸ ಕಂಡುಬಂದಿತ್ತು. ಅವರನ್ನು ಹೃದಯ ಚಿಕಿತ್ಸಾ ವಿಭಾಗದ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು’ ಎಂದು ಪಿಆರ್ಎಸ್ ಖಾಸಗಿ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.