ಭಾನುವಾರ 'ಮನ್ ಕಿ ಬಾತ್'ನಲ್ಲಿ ಮಾತನಾಡಿದ ಪಿಎಂ ಮೋದಿ, ಕಿಸಾನ್ ರೈಲಿನ ಮೂಲಕ ಮಾವಿನ ಹಣ್ಣುಗಳು ದಿಲ್ಲಿ ಮತ್ತು ಉತ್ತರ ಭಾರತದ ಜನರಿಗೆ ತಲುಪುತ್ತವೆ ಮತ್ತು ಮಾವು ಬೆಳೆಗಾರರಿಗೆ ಉತ್ತಮ ಆದಾಯವೂ ದೊರೆಯುತ್ತದೆ. ಕಿಸಾನ್ ರೈಲು ಈವರೆಗೆ 9 ಲಕ್ಷ ಟನ್ ಉತ್ಪನ್ನವನ್ನು ಸಾಗಿಸಿದೆ. ಬಹಳ ಕಡಿಮೆ ಖರ್ಚಿನಿಂದ ದೇಶದ ದೂರದೂರದ ಪ್ರದೇಶಗಳಿಗೆ ಹಣ್ಣು ಮತ್ತು ತರಕಾರಿಗಳನ್ನು ಕಳುಹಿಸಿಕೊಡಲು ರೈತರಿಗೆ ಸಾಧ್ಯವಾಗುತ್ತಿದೆ ಎಂದರು.