<p><strong>ಜಮ್ಮು:</strong> ಜಮ್ಮು ಮತ್ತು ಕಾಶ್ಮೀರದ ಉಧಮ್ಪುರ್ ಪಟ್ಟಣದ ನ್ಯಾಯಾಲಯದ ಸಂಕೀರ್ಣದ ಹೊರಗಡೆ ಸಂಭವಿಸಿದ್ದ ಸ್ಫೋಟ ಪ್ರಕರಣದಲ್ಲಿ ನಂಟು ಹೊಂದಿರುವ ಲಷ್ಕರ್–ಎ–ತಯಬಾ ಉಗ್ರ ಹಾಗೂ ಆತನ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಅನೇಕ ಶಂಕಿತರನ್ನು ತನಿಖೆಗೆ ಒಳಪಡಿಸಲಾಗಿತ್ತು. ರಂಬಾನ್ ಜಿಲ್ಲೆಯ ಹಲ್ಲಾ ಬೊಹಾರ್ ಧಾರ್ ನಿವಾಸಿ ಮೊಹಮ್ಮದ್ ರಂಜಾನ್ ಸೊಹೈಲ್ನನ್ನು ಬಂಧಿಸಲಾಗಿದೆ ಎಂದು ಎಡಿಜಿಪಿ ಮುಕೇಶ್ ಸಿಂಗ್ ತಿಳಿಸಿದ್ದಾರೆ.</p>.<p><a href="https://www.prajavani.net/india-news/one-killed-seven-injured-in-blast-outside-district-court-complex-in-jammu-regions-udhampur-town-917747.html" target="_blank">ಜಮ್ಮು: ಉಧಮ್ಪುರ್ ನ್ಯಾಯಾಲಯದ ಹೊರಗಡೆ ಸ್ಫೋಟ, ಓರ್ವ ಸಾವು</a></p>.<p>ದೋಡಾದ ಖುರ್ಷಿದ್ ಅಹ್ಮದ್ ಹಾಗೂ ಭದೇರ್ವಾಹ್ನ ನಿಸಾರ್ ಅಹ್ಮದ್ ಇನ್ನಿಬ್ಬರು ಬಂಧಿತರು.</p>.<p>ನ್ಯಾಯಾಲಯದ ಆವರಣದಲ್ಲಿ ಐಇಡಿ ಇಟ್ಟಿರುವ ಬಗ್ಗೆ ಸೊಹೈಲ್ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಮೊಹಮ್ಮದ್ ಅಮಿನ್ ಅಲಿಯಾಸ್ ಖುಬೈಬ್ ಸೂಚನೆಯಂತೆ ಸ್ಫೋಟಕ ಇಟ್ಟಿರುವುದಾಗಿ ಆತ ಹೇಳಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.</p>.<p>ಮಾರ್ಚ್ನಲ್ಲಿ ಉಧಮ್ಪುರ್ ಪಟ್ಟಣದ ನ್ಯಾಯಾಲಯದ ಸಂಕೀರ್ಣದ ಹೊರಗಡೆ ಐಇಡಿ ಸ್ಫೋಟ ಸಂಭವಿಸಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರು. 14 ಮಂದಿ ಗಾಯಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮ್ಮು:</strong> ಜಮ್ಮು ಮತ್ತು ಕಾಶ್ಮೀರದ ಉಧಮ್ಪುರ್ ಪಟ್ಟಣದ ನ್ಯಾಯಾಲಯದ ಸಂಕೀರ್ಣದ ಹೊರಗಡೆ ಸಂಭವಿಸಿದ್ದ ಸ್ಫೋಟ ಪ್ರಕರಣದಲ್ಲಿ ನಂಟು ಹೊಂದಿರುವ ಲಷ್ಕರ್–ಎ–ತಯಬಾ ಉಗ್ರ ಹಾಗೂ ಆತನ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಅನೇಕ ಶಂಕಿತರನ್ನು ತನಿಖೆಗೆ ಒಳಪಡಿಸಲಾಗಿತ್ತು. ರಂಬಾನ್ ಜಿಲ್ಲೆಯ ಹಲ್ಲಾ ಬೊಹಾರ್ ಧಾರ್ ನಿವಾಸಿ ಮೊಹಮ್ಮದ್ ರಂಜಾನ್ ಸೊಹೈಲ್ನನ್ನು ಬಂಧಿಸಲಾಗಿದೆ ಎಂದು ಎಡಿಜಿಪಿ ಮುಕೇಶ್ ಸಿಂಗ್ ತಿಳಿಸಿದ್ದಾರೆ.</p>.<p><a href="https://www.prajavani.net/india-news/one-killed-seven-injured-in-blast-outside-district-court-complex-in-jammu-regions-udhampur-town-917747.html" target="_blank">ಜಮ್ಮು: ಉಧಮ್ಪುರ್ ನ್ಯಾಯಾಲಯದ ಹೊರಗಡೆ ಸ್ಫೋಟ, ಓರ್ವ ಸಾವು</a></p>.<p>ದೋಡಾದ ಖುರ್ಷಿದ್ ಅಹ್ಮದ್ ಹಾಗೂ ಭದೇರ್ವಾಹ್ನ ನಿಸಾರ್ ಅಹ್ಮದ್ ಇನ್ನಿಬ್ಬರು ಬಂಧಿತರು.</p>.<p>ನ್ಯಾಯಾಲಯದ ಆವರಣದಲ್ಲಿ ಐಇಡಿ ಇಟ್ಟಿರುವ ಬಗ್ಗೆ ಸೊಹೈಲ್ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಮೊಹಮ್ಮದ್ ಅಮಿನ್ ಅಲಿಯಾಸ್ ಖುಬೈಬ್ ಸೂಚನೆಯಂತೆ ಸ್ಫೋಟಕ ಇಟ್ಟಿರುವುದಾಗಿ ಆತ ಹೇಳಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.</p>.<p>ಮಾರ್ಚ್ನಲ್ಲಿ ಉಧಮ್ಪುರ್ ಪಟ್ಟಣದ ನ್ಯಾಯಾಲಯದ ಸಂಕೀರ್ಣದ ಹೊರಗಡೆ ಐಇಡಿ ಸ್ಫೋಟ ಸಂಭವಿಸಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರು. 14 ಮಂದಿ ಗಾಯಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>