ಪಿಎಂ ಕೇರ್ಸ್ ನಿಧಿಗೆ ಸಂಬಂಧಿಸಿದಂತೆ ಮಾತನಾಡಿದ ಠಾಕುರ್, ‘ವಿರೋಧ ಪಕ್ಷದವರು ಒಳ್ಳೆಯ ವಿಚಾರಗಳನ್ನು ಸಹ ಕೆಟ್ಟ ದೃಷ್ಟಿಯಿಂದಲೇ ನೋಡುತ್ತಿದ್ದಾರೆ. ಪಿಎಂ ಕೇರ್ಸ್ ಅನ್ನು ಮಾರ್ಚ್ ತಿಂಗಳಲ್ಲಿ ಆರಂಭಿಸಲಾಗಿತ್ತು. ಏಪ್ರಿಲ್ ತಿಂಗಳಲ್ಲೇ ಇದಕ್ಕೆ ವಿರೋಧ ವ್ಯಕ್ತವಾಯಿತು. ಈ ವಿಚಾರದಲ್ಲಿ ನ್ಯಾಯಾಲಯವೂ ನಿಧಿಯ ಪರವಾಗಿ ತೀರ್ಪು ನೀಡಿದೆ. ಇದು ಸಂವಿಧಾನಾತ್ಮಕವಾಗಿ ರಚಿಸಲಾದ ಸಾರ್ವಜನಿಕ ದತ್ತಿನಿಧಿ. ಬಡವರು, ವೃದ್ಧರು ಮಾತ್ರವಲ್ಲ ಮಕ್ಕಳು ಸಹ ಈ ನಿಧಿಗೆ ದೇಣಿಗೆ ನೀಡಿದ್ದಾರೆ' ಎಂದರು.