ಘಟನೆ ವಿವರ:ಅರ್ಚನಾ ಚೌಧರಿ ತಮ್ಮ ಮಗ ರವಿರಾಜ್ನನ್ನು ಮೂತ್ರ ವಿಸರ್ಜನೆಗೆಂದು ಹೊರಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಹುಲಿ ಮಗು ಮೇಲೆ ದಾಳಿ ಮಾಡಿತ್ತು. ಮಗು ರಕ್ಷಣೆಗೆ ಮುಂದಾದ ಅರ್ಚನಾ ಅವರ ಮೇಲೂ ಹುಲಿ ಎರಗಿತ್ತು. ಅರ್ಚನಾ ಹುಲಿಯೊಂದಿಗೆ ಹೋರಾಡುತ್ತಲೇ ಗ್ರಾಮಸ್ಥರನ್ನು ಕೂಗಿ ಕರೆದರು. ಸ್ಥಳಕ್ಕೆ ಗ್ರಾಮಸ್ಥರು ದೌಡಾಯಿಸುತ್ತಿದ್ದಂತೆಯೇ ವ್ಯಾಘ್ರ ಮಗುವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದೆ.