ವಧುವಿಗೆ ಕಾಯಂ ಸರ್ಕಾರಿ ಕೆಲಸ ಕೊಡಿಸುವುದಾಗಿ ಸುಮಾರು 10 ಲಕ್ಷ ರೂಪಾಯಿಯನ್ನು ಕಸಿದುಕೊಂಡಿರುವುದಾಗಿ ಹುಡುಗಿಯ ಮನೆಯವರು ಆರೋಪಿಸಿದ್ದಾರೆ. ಇಷ್ಟಕ್ಕೆ ನಿಲ್ಲಿಸಿದ್ದರೆ ಕಾನೂನು ಕುಣಿಕೆಯಿಂದ ಪಾರಾಗುತ್ತಿದ್ದನೋ ಏನೋ. 21 ಉಗುರುಳ್ಳ ಆಮೆಯನ್ನು ಕೊಡಬೇಕು ಎಂದು ವಧುವಿನ ಮನೆಯವರನ್ನು ಪೀಡಿಸಿದ್ದಾನೆ. ಜೊತೆಗೆ ಕಪ್ಪು ಲ್ಯಾಬ್ರಡಾರ್ ನಾಯಿ, ಬುದ್ಧನ ವಿಗ್ರಹ, ಬೆಲೆಬಾಳುವ ದೇವರ ದೀಪಗಳ ಬೇಡಿಕೆ ಇಟ್ಟಿದ್ದಾನೆ.