ತಿರುವನಂತಪುರ: ‘ಯುದ್ಧ ನಡೆಯುವ ಸಾಧ್ಯತೆ ಬಗ್ಗೆ ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದಾಗ, ನಾವು ಇಂತಹ ಪರಿಸ್ಥಿತಿಯನ್ನು ಎದುರಿಸಲಿದ್ದೇವೆ ಎಂದು ನಿರೀಕ್ಷಿಸಿರಲಿಲ್ಲ. ಆ ಕಾರಣಕ್ಕಾಗಿಯೇ ಇಲ್ಲೇ ಉಳಿದೆವು. ಈಗ ನಾವು ಅಕ್ಷರಶಃ ಇಲ್ಲಿ ಸಿಲುಕಿಕೊಂಡಿದ್ದೇವೆ. ಭೀಕರ ಬಾಂಬ್ ದಾಳಿಗಳಿಂದ ಭೀತಿಗೊಳಗಾಗಿದ್ದೇವೆ’ ಎಂದು ಉಕ್ರೇನ್ನ ಕೀವ್ನಲ್ಲಿ ಸಿಲುಕಿಕೊಂಡಿರುವ ಮಲಯಾಳಿ ವೈದ್ಯ ಡಾ. ಸೀಮೇಶ್ ಶಶಿಧರನ್ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.