ಆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ‘ಇದೊಂದು ಸೌಹಾರ್ದ ಭೇಟಿ. ಕೋವಿಡ್ಗೆ ಸಂಬಂಧಿಸಿದ ಸಮಸ್ಯೆಗಳು, ಲಸಿಕೆ, ಔಷಧಧ ಅಗತ್ಯತೆ ಕುರಿತು ಪ್ರಸ್ತಾಪಿಸಿದ್ದೇನೆ. ಅಲ್ಲದೆ, ಪಶ್ಚಿಮ ಬಂಗಾಳದ ಹೆಸರನ್ನು ಬದಲಿಸಲು ಸಲ್ಲಿಸಲಾಗಿರುವ ಪ್ರಸ್ತಾವನೆಯನ್ನು ಗಮನಕ್ಕೆ ತಂದಿದ್ದೇನೆ. ಇವುಗಳತ್ತ ಗಮನಹರಿಸುವುದಾಗಿ ಮೋದಿ ಹೇಳಿದ್ದಾರೆ,’ ಎಂದು ತಿಳಿಸಿದರು.