ಹಿಂದಿಯಲ್ಲಿ ಟ್ವೀಟ್ ಮಾಡಿರುವ ಮಾಯಾವತಿ, ‘ಸಮಾಜವಾದಿ ಪಕ್ಷದ ಸ್ಥಿತಿ ತುಂಬಾ ಹದಗೆಟ್ಟಿದೆ. ಆ ಪಕ್ಷದವರು ಪ್ರತಿದಿನ ಮಾಧ್ಯಮಗಳಲ್ಲಿ ಸುದ್ದಿಯಲ್ಲಿರಲು ಬಯಸುತ್ತಾರೆ. ಅದಕ್ಕಾಗಿ ಮಾಜಿ ಶಾಸಕರು ಮತ್ತು ಇತರ ಪಕ್ಷಗಳಿಂದ ಹೊರ ಹಾಕಲ್ಪಟ್ಟ ಸಣ್ಣ ಪುಟ್ಟ ಕಾರ್ಯಕರ್ತರು ಅಥವಾ ತಮ್ಮ ಪಕ್ಷದಲ್ಲೇ ನಿಷ್ಕ್ರಿಯರಾಗಿರುವ ನಾಯಕರನ್ನು ಆಗಾಗ್ಗೆ ಎಸ್ಪಿ ಮುಖ್ಯಸ್ಥರ ನೇತೃತ್ವದಲ್ಲೇ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಸದಾ ಸುದ್ದಿಯಲ್ಲಿರಲು ಪ್ರಯತ್ನಿಸುತ್ತಾರೆ' ಎಂದು ಟೀಕಿಸಿದ್ದಾರೆ.