‘ನಾನು ಮತ್ತೆ ಅಕ್ರಮ ಬಂಧನಕ್ಕೊಳಗಾಗಿದ್ದೇನೆ. ಎರಡು ದಿನಗಳಿಂದ ನನ್ನನ್ನು ಪುಲ್ವಾಮಾದ ವಹೀದ್ ಅವರ ಕುಟುಂಬದವರ ಭೇಟಿಗೆಜಮ್ಮು ಮತ್ತು ಕಾಶ್ಮೀರ ಆಡಳಿತ ಅವಕಾಶ ನೀಡುತ್ತಿಲ್ಲ. ಇಲ್ಲಿನ ಭದ್ರತಾ ಪಡೆಗಳು, ಬಿಜೆಪಿ ಸಚಿವರು ಮತ್ತು ಅವರ ಕೈಗೊಂಬೆಗಳಾಗಿರುವವರಿಗೆ ಮಾತ್ರ ಓಡಾಡಲು ಅವಕಾಶ ನೀಡುತ್ತವೆ. ಅವರುಗಳಿಂದ ಭದ್ರತಾ ವ್ಯವಸ್ಥೆ ಮೇಲೆ ಏನೂ ತೊಂದರೆಯಾಗುವುದಿಲ್ಲ. ಆದರೆ, ನನ್ನ ವಿಚಾರದಲ್ಲಿ ಮಾತ್ರ ಸಮಸ್ಯೆ ಉಂಟಾಗುತ್ತದೆ’ ಎಂದು ಮುಫ್ತಿ ಅವರು ಟ್ವೀಟ್ನಲ್ಲಿ ಆರೋಪಿಸಿದ್ದಾರೆ.