‘ತಾನು ಮಾಡಿದ ಆರೋಪಗಳಿಗೆ ರಮಣಿ ಅವರು ಕ್ಷಮೆ ಕೇಳಿದರೆ, ದೂರನ್ನು ಹಿಂಪಡೆಯುವ ಕುರಿತು ಅಕ್ಬರ್ ಅವರ ಜೊತೆ ಮಾತುಕತೆ ನಡೆಸುವುದಾಗಿ’ ಗೀತಾ ಅವರು ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಮಣಿ ಅವರ ಪರ ವಕೀಲರಾದ ಭವೂಕ್ ಚೌಹಾಣ್, ‘ರಮಣಿ ಅವರು ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆ. ದೂರನ್ನು ಅಕ್ಬರ್ ಅವರು ಹಿಂಪಡೆಯುವುದಾದರೆ, ಪಡೆಯಬಹುದು’ ಎಂದು ಹೇಳಿದರು.