ಕೆಂಪುಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಮೋದಿ ಅವರು ಆತ್ಮನಿರ್ಭರ ಭಾರತ ನಿರ್ಮಾಣವನ್ನು ಪ್ರತಿಪಾದಿಸಿದ್ದರು. ಪ್ರಧಾನಿ ಅವರದೂರದೃಷ್ಟಿ, ಧ್ಯೇಯ, ಸ್ವಾಭಿಮಾನಿ ಭಾರತ ನಿರ್ಮಿಸುವ ಧ್ಯೇಯವನ್ನು ಬಿಂಬಿಸಿತು ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಕುರಿತು ಮಾಡಿದ ಸರಣಿ ಟ್ವೀಟ್ ಗಳಲ್ಲಿ ಅಭಿಪ್ರಾಯಪಟ್ಟಿದ್ದಾರೆ.