ನವದೆಹಲಿ: ಗಡಿ ವಿವಾದದ ಹಿನ್ನಲೆಯಲ್ಲಿ ತನ್ನ ನೆರೆಯ ರಾಜ್ಯ ಮಿಜೋರಾಂಗೆ ತೆರಳದಂತೆ ರಾಜ್ಯದ ಜನರಿಗೆ ಸೂಚನೆ ನೀಡಿರುವ ಅಸ್ಸಾಂ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ ಕಾರಿದೆ.
ಮಿಜೋರಾಂಜತೆಗಿನಅಂತರ ರಾಜ್ಯ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಂಘರ್ಷದ ವೇಳೆ ಆರು ಪೊಲೀಸರು ಸೇರಿದಂತೆ ಒಟ್ಟು ಏಳು ಮಂದಿ ಸಾವಿಗೀಡಾಗಿದ್ದರು. 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದನ್ನುಗಮನದಲ್ಲಿರಿಸಿಅಸ್ಸಾಂ ಸರ್ಕಾರ ಜನರಿಗೆ ಸೂಚನೆ ನೀಡಿದೆ.
ಈ ಸಂಬಂಧಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಧಿಕಾರದಲ್ಲಿ ಮುಂದುವರಿಯಬೇಕೇ? ಎಂದು ಪ್ರಶ್ನಿಸಿದ್ದಾರೆ.
ʼದೇಶದ ಇತಿಹಾದಲ್ಲೇ ಇದು ಅತ್ಯಂತ ಮುಜುಗರದ ದಿನ! ದೇಶದ ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣಿಸಲು ಸಾಧ್ಯವಾಗದಿರುವಾಗ, ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಅವರಹುದ್ದೆಗಳಲ್ಲಿ ಮುಂದುವರಿಯುವ ಹಕ್ಕು ಇದೆಯೇ? ಮೋದಿಇದ್ದರೆ ಇವೆಲ್ಲ ಸಾಧ್ಯʼ ಎಂದು ಕುಟುಕಿದ್ದಾರೆ.
ʼಅಸ್ಸಾಂ ಜನರ ವೈಯಕ್ತಿಕ ಸುರಕ್ಷತೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗುವುದನ್ನು ಸಹಿಸಲಾಗದು.ಹೀಗಾಗಿ ಸದ್ಯದ ಸ್ಥಿತಿಯನ್ನುಪರಿಗಣಿಸಿ ಅಸ್ಸಾಂ ಜನರು ಮಿಜೋರಾಂಗೆ ಪ್ರಯಾಣಿಸದಂತೆ ಸೂಚಿಸಲಾಗಿದೆʼ ಎಂದು ಅಸ್ಸಾಂ ಸರ್ಕಾರ ಸೂಚಿಸಿದೆ.ಮಾತ್ರವಲ್ಲದೆ, ಕೆಲಸದ ಕಾರಣಗಳಿಂದಾಗಿ ಮಿಜೋರಾಂನಲ್ಲಿ ಉಳಿದುಕೊಂಡಿರುವವರೂ ʼಅತ್ಯಂತ ಜಾಗರೂಕರಾಗಿರಿʼ ಎಂದೂ ತಿಳಿಸಿದೆ.
ಗಲಭೆ ನಡೆದ ಸ್ಥಳಕ್ಕೆ ಕೇಂದ್ರ ಮೀಸಲು ಪೊಲೀಸ್ ಪಡೆಯನ್ನು (ಸಿಆರ್ಪಿಎಫ್) ನಿಯೋಜಿಸಲಾಗಿದೆ.
ಇವನ್ನೂ ಓದಿ
*EXPLAINER| ಅಸ್ಸಾಂ–ಮಿಜೋರಾಂ ನಡುವೆ ಏಕೆ ಸಂಘರ್ಷ? ಬ್ರಿಟಿಷ್ ಕಾಲದಿಂದ ಜೀವಂತ
*ಅಸ್ಸಾಂ: ಗಡಿ ಹಿಂಸಾಚಾರದಲ್ಲಿ ಪೊಲೀಸರ ಸಾವು– ಮೂರು ದಿನ ಶೋಕಾಚರಣೆ
*ಅಸ್ಸಾಂ–ಮಿಜೋರಾಂ ಗಡಿ ಹಿಂಸಾಚಾರ: ಅಮಿತ್ ಶಾ ವಿರುದ್ಧ ರಾಹುಲ್ ವಾಗ್ದಾಳಿ
*ಅಸ್ಸಾಂ-ಮಿಜೋರಾಂ ಸಂಘರ್ಷ: ಗಡಿ ಮರುವಿಂಗಡಣೆಯೇ ಪರಿಹಾರ-ಬಿಜೆಪಿ ನಾಯಕರ ಪ್ರತಿಪಾದನೆ
*ಅಸ್ಸಾಂ: ಬಂದ್ನಿಂದ ಜನಜೀವನ ಅಸ್ತವ್ಯಸ್ತ
*ನಮ್ಮ ನೆಲದಲ್ಲಿ ವಿದ್ಯುತ್ ಕಂಬ ಹಾಕುವ ಮೇಘಾಲಯದ ಯತ್ನವನ್ನು ತಡೆದಿದ್ದೇವೆ: ಅಸ್ಸಾಂ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.