ನಿರುದ್ಯೋಗಿ ಹಾಗೂ ಕುಡಿತದ ಚಟವಿರುವ ಆರೋಪಿಯು ಜನವರಿ 6ರಂದು ಮುಂಬೈ ಪೊಲೀಸರಿಗೆ ಕರೆ ಮಾಡಿ, ತಾನು ಸೇನೆಯಿಂದ ಬಂದ ವ್ಯಕ್ತಿಯಾಗಿದ್ದು, ಮುಂಬೈನಲ್ಲಿ ‘ಅಣು ಬಾಂಬ್’ ದಾಳಿ ನಡೆಯಲಿದೆ. ಅಲ್ಲದೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್(ಸಿಎಸ್ಎಂಟಿ), ಕುರ್ಲಾ ರೈಲು ನಿಲ್ದಾಣ ಸೇರಿದಂತೆ ವಿವಿಧೆಡೆಯೂ ಬಾಂಬ್ ದಾಳಿಗಳು ನಡೆಯಲಿವೆ’ ಎಂದು ತಿಳಿಸಿರುವುದಾಗಿ ಪೊಲೀಸರು ವಿವರಿಸಿದ್ದಾರೆ.