ಗೋಪೇಶ್ವರ್: ಉತ್ತರಾಖಂಡದ ನಂದಪ್ರಯಾಗ್ ನಗರಸಭೆಯು ದೇಶದ ಅತ್ಯಂತ ಸ್ವಚ್ಛ ನಗರಸಭೆ ಎಂಬ ಹಿರಿಮೆಗೆ ಭಾಜನವಾಗಿದೆ.
ರಾಷ್ಟ್ರೀಯ ಸ್ವಚ್ಛತಾ ಮಿಷನ್ ಅಡಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಜನರ ಪ್ರತಿಕ್ರಿಯೆಯನ್ನು ಆಧರಿಸಿನಂದಪ್ರಯಾಗ್ ಅನ್ನು ಸ್ವಚ್ಛ ನಗರಸಭೆ ಎಂದು ಆಯ್ಕೆ ಮಾಡಲಾಗಿದೆ.
ಅಲಕಾನಂದ ಮತ್ತು ಮಂದಾಕಿನಿ ನದಿಗಳ ಸಂಗಮ ಸ್ಥಳದಲ್ಲಿ ಈ ನಗರವು ಇದೆ.
ಆಗಸ್ಟ್ 20ರಂದು ನಡೆಯುವ ಆನ್ಲೈನ್ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದುನಂದಪ್ರಯಾಗ್ ನಗರ ಸಭೆ ಅಧ್ಯಕ್ಷೆ ಹಿಮಾನಿ ವೈಷ್ಣವ ಮಂಗಳವಾರ ತಿಳಿಸಿದ್ದಾರೆ.
‘ದೇಶದ 4,000ಕ್ಕೂ ಅಧಿಕ ನಗರಸಭೆಗಳನ್ನು ಹಿಂದಿಕ್ಕಿ ಈ ಪ್ರಶಸ್ತಿ ಪಡೆದಿರುವುದು ಖುಷಿ ನೀಡಿದೆ. ಇದರಿಂದ ಹೆಮ್ಮೆಯೂ ಆಗಿದೆ’ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
‘ತ್ಯಾಜ್ಯ ವಿಲೇವಾರಿಯನ್ನು ನಾವು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೇವೆ. ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕಿಸುತ್ತಿದ್ದೇವೆ. ಹಸಿ ಕಸದಿಂದ ಸಾವಯವ ಗೊಬ್ಬರ ತಯಾರಿಸುತ್ತಿದ್ದೇವೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.