‘ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರದಲ್ಲೇ ಸರ್ಕಾರ ರಚನೆಯಾಗಲಿದ್ದು, ಹೊಸ ಸರ್ಕಾರ ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿ ಮಾಡಲಿದೆ. ಅಧಿಕಾರಿಗಳು ತಮ್ಮನ್ನು ರಾಜರಂತೆ ಭಾವಿಸಿಕೊಂಡಿದ್ದಾರೆ. ಅವರು ರಾಜರಲ್ಲ, ಜನರ ಸೇವಕರು. ಜನರಿಗಾಗಿ ಕೆಲಸ ಮಾಡಬೇಕು. ಇಂದು ಅವರು ಏನು ಮಾಡುತ್ತಿದ್ದಾರೊ ಅದೆಲ್ಲದಕ್ಕೂ ನಾಳೆ ಅವರು ಉತ್ತರದಾಯಿಗಳು’ ಎಂದು ಅಬ್ದುಲ್ಲಾ ಎಚ್ಚರಿಸಿದರು.